ದೇಶದ ಜಾತ್ಯತೀತತೆ-ಪ್ರಜಾಪ್ರಭುತ್ವ ಉಳಿವಿಗಾಗಿ ಪ್ರತಿಯೊಬ್ಬರು ಒಂದಾಗಬೇಕು: ಅಥಾವುಲ್ಲಾ ಜೋಕಟ್ಟೆ

Prasthutha|

ಬೆಂಗಳೂರು: ಫ್ಯಾಶಿಸ್ಟ್ ಸರ್ಕಾರದ ಕುತಂತ್ರದಿಂದ ದೇಶದ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರೂ ಒಂದಾಗಬೇಕು ಎಂದು SDPI ಕರ್ನಾಟಕ ರಾಜ್ಯಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆಯ ನಾಯಕರ ಬಂಧನವು ಫ್ಯಾಶಿಸ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರವನ್ನು ಸಾರುತ್ತದೆ. ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು ಎಂದು ತಿಳಿಸಿದ್ದಾರೆ.

ದೇಶಾದ್ಯಂತ NIA ತನಿಖಾ ಸಂಸ್ಥೆಯು ಸಾಮಾಜಿಕ ಸಂಘಟನೆಯಾದ PFI ಅನ್ನು ಗುರಿಯಾಗಿಸಿ ದಾಳಿ ನಡೆಸಿ, ಅದರ ನಾಯಕರ ಬಂಧನದ ಹಿನ್ನೆಲೆಯಲ್ಲಿ ಅಥಾವುಲ್ಲಾ ಜೋಕಟ್ಟೆ ಈ ಹೇಳಿಕೆ ನೀಡಿದ್ದಾರೆ.

Join Whatsapp