Home ಟಾಪ್ ಸುದ್ದಿಗಳು ಡ್ರೈವಿಂಗ್ ನಲ್ಲಿ ಹೃದಯಾಘಾತ: ಇಂಜಿನಿಯರ್ ಸ್ಥಳದಲ್ಲೇ ಸಾವು

ಡ್ರೈವಿಂಗ್ ನಲ್ಲಿ ಹೃದಯಾಘಾತ: ಇಂಜಿನಿಯರ್ ಸ್ಥಳದಲ್ಲೇ ಸಾವು

ಧಾರವಾಡ: ಯುವಕನೋರ್ವ  ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತದಿಂದ ‌ಮೃತಪಟ್ಟ ದಾರುಣ ಘಟನೆ‌ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕರ್ಲವಾಡದಲ್ಲಿ ನಡೆದಿದೆ.

ಧಾರವಾಡ ಜಿಪಂ ಇಂಜಿನಿಯರ್ ಆಗಿದ್ದ ನವಲಗುಂದ ತಾಲೂಕಿನ ಲೋಕನಾಥ (29) ಎಂಬವರು ಹುಬ್ಬಳ್ಳಿಯಿಂದ ನವಲಗುಂದಗೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಿಂದ ಕಾರು ತೋಟಕ್ಕೆ ನುಗ್ಗಿ ನಿಂತಿದೆ.

ಈ ಬಗ್ಗೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version