Home ಟಾಪ್ ಸುದ್ದಿಗಳು ನೇಹಾ ಕೊಲೆ ಪ್ರಕರಣ | ಎನ್ ಕೌಂಟರ್ ಕಾನೂನು ಜಾರಿಯಾಗಬೇಕು: ಸಚಿವ ಸಂತೋಷ್ ಲಾಡ್

ನೇಹಾ ಕೊಲೆ ಪ್ರಕರಣ | ಎನ್ ಕೌಂಟರ್ ಕಾನೂನು ಜಾರಿಯಾಗಬೇಕು: ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಅತ್ಯಂತ ಖಂಡನೀಯವಾಗಿದ್ದು, ಇಂತಹ ಪ್ರಕರಣದ ಆರೋಪಿಗೆ ಎನ್’ಕೌಂಟರ್ ಕಾನೂನು ಜಾರಿಗೆ ಬರಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.


ನಗರದ ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿದ ಅವರು, ಕುಟುಂಬದವರಿಗೆ ಸಾಂತ್ವನ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.


ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಮುಖಂಡರು ಈಗಾಗಲೇ ಮಾತನಾಡಿದ್ದಾರೆ. ಆ ಕುರಿತು ನಾನು ಹೆಚ್ವಿಗೆ ಹೇಳುವುದಿಲ್ಲ. ಆದರೆ, ಇಂತಹ ಪ್ರಕರಣಗಳಿಗೆ ಮುಂದೊಂದು ದಿನ ಎನ’ಕೌಂಟರ್ ಕಾನೂನು ಬರಲೇಬೇಕು. ಇದು ಜಾರಿಯಾದರೆ, ಇಂತಹ ಪ್ರಕರಣದ ಆರೋಪಿಗಳನ್ನು ಹೊಡೆದುರುಳಿಸಬಹುದು’ ಎಂದು ಅಭಿಪ್ರಾಯಪಟ್ಟರು.

Join Whatsapp
Exit mobile version