ಮುಖ್ಯಮಂತ್ರಿ ಎದುರೇ ಬಾಟಲಿಯಲ್ಲಿನ ದ್ರಾವಣ ಸೇವಿಸಲು ಯತ್ನಿಸಿದ ವೃದ್ಧ

Prasthutha|

ಬೆಂಗಳೂರು: ಪೊಲೀಸರಿಂದ ನನಗೆ ಅನ್ಯಾಯ ಆಗಿದೆ ಎಂದು ಅಳಲು ತೋಡಿಕೊಂಡ ವೃದ್ಧರೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರೇ ಬಾಟಲಿಯಲ್ಲಿ ಯಾವುದೋ ದ್ರಾವಣ ಸೇವಿಸಲು ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

- Advertisement -

ಸುಂಕದಕಟ್ಟೆಯ ಚಂದ್ರಶೇಖರ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.

ನಿವೇಶನದ ಮಾರಾಟದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆಲವರ ಜೊತೆ ಸೇರಿ ವಂಚನೆ ಮಾಡಿದ್ದಾರೆ. ನನಗೆ ನ್ಯಾಯ ಕೊಡಿ ಎಂದು ಮುಖ್ಯಮಂತ್ರಿಗಳ  ಬಳಿ ಅಳಲು ತೋಡಿಕೊಂಡ ಚಂದ್ರಶೇಖರ್ ಬಾಟಲಿ ತೆಗೆದು ಸಿಎಂಗೆ ತೋರಿಸಿ ಕುಡಿಯಲು ಯತ್ನಿಸಿದ್ದಾರೆ.

- Advertisement -
https://prasthutha.com/wp-content/uploads/2022/03/WhatsApp-Video-2022-03-18-at-11.06.12-AM-1.mp4

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಚಂದ್ರಶೇಖರ್ ಅವರನ್ನು ತಡೆದು ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

Join Whatsapp
Exit mobile version