Home ಟಾಪ್ ಸುದ್ದಿಗಳು ತಮ್ಮ ಗುಂಪಿಗೆ ‘ಶಿವಸೇನೆ ಬಾಳಾಸಾಹೇಬ್’ ಎಂದು ಹೆಸರಿಟ್ಟ ಏಕನಾಥ್ ಶಿಂಧೆ ಬಣ

ತಮ್ಮ ಗುಂಪಿಗೆ ‘ಶಿವಸೇನೆ ಬಾಳಾಸಾಹೇಬ್’ ಎಂದು ಹೆಸರಿಟ್ಟ ಏಕನಾಥ್ ಶಿಂಧೆ ಬಣ

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಸರಕಾರವನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಒತ್ತಾಯಿಸುತ್ತಿರುವ ನಡುವೆಯೇ, ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಶನಿವಾರ ತಮ್ಮ ಗುಂಪನ್ನು ‘ಶಿವಸೇನೆ ಬಾಳಾಸಾಹೇಬ್’ ಎಂದು ಹೆಸರಿಸಿದ್ದಾರೆ.

“ನಮ್ಮ ಗುಂಪನ್ನು ಶಿವಸೇನೆ ಬಾಳಾಸಾಹೇಬ್ ಎಂದು ಕರೆಯಲಾಗುವುದು. ನಾವು ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ” ಎಂದು ಶಿವಸೇನೆಯ ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಕಾರ್ಯಕಾರಿ ಸಭೆಯ ನಡುವೆ ಏಕನಾಥ್ ಶಿಂಧೆ ಗುಂಪಿನಿಂದ ಈ ನಿರ್ಧಾರ ಬಂದಿದೆ.

Join Whatsapp
Exit mobile version