Home ಟಾಪ್ ಸುದ್ದಿಗಳು ಊಟಕ್ಕೆಂದು ಸ್ನೇಹಿತರ ಮನೆಗೆ ಹೋಗಿದ್ದ ಮಹಿಳಾ ಸಿಐಡಿ ಡಿವೈಎಸ್ ಪಿ ಆತ್ಮಹತ್ಯೆ

ಊಟಕ್ಕೆಂದು ಸ್ನೇಹಿತರ ಮನೆಗೆ ಹೋಗಿದ್ದ ಮಹಿಳಾ ಸಿಐಡಿ ಡಿವೈಎಸ್ ಪಿ ಆತ್ಮಹತ್ಯೆ

ಬೆಂಗಳೂರು : ಇಲ್ಲಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಡಿವೈಎಸ್ ಪಿ ಲಕ್ಷ್ಮಿ ವಿ.(33) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲಕ್ಷ್ಮಿ ಅವರು 2014ರ ಕೆಪಿಎಸ್ ಸಿ ಬ್ಯಾಚ್ ನ ಅಧಿಕಾರಿಯಾಗಿದ್ದರು. 2017ರಲ್ಲಿ ನೇಮಕಾತಿಗೊಂಡಿದ್ದ ಲಕ್ಷ್ಮಿ ಅವರು ಪ್ರಸ್ತುತ ಸಿಐಡಿ ಡಿವೈಎಸ್ ಪಿ ಕಾರ್ಯ ನಿರ್ವಹಿಸುತ್ತಿದ್ದರು.  

ಸಿಐಡಿ ಡಿವೈಎಸ್ ಪಿ ಲಕ್ಷ್ಮಿ ಅವರು ಪರಿಚಿತರ ಮನೆಗೆ ಊಟಕ್ಕೆ ಹೋದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಲಕ್ಷ್ಮಿ ಅವರು ಮೂಲತಃ ಕೋಲಾರದ ಮಾಲೂರಿನವರಾಗಿದ್ದು, ಕೋಣನಕುಂಟೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.

ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version