DYFI ಕಾರ್ಯಕರ್ತ ಅಬ್ದುಲ್ ರಹ್ಮಾನ್ ಕೊಲೆ | ಯೂತ್ ಲೀಗ್ ನಾಯಕ ಸೇರಿ ಮೂವರ ವಿರುದ್ಧ ಕೇಸ್ ದಾಖಲು

Prasthutha|

ಕಾಸರಗೋಡು : ಡಿವೈಎಫ್ ಐ ಕಾರ್ಯಕರ್ತ ಅಬ್ದುಲ್ ರಹ್ಮಾನ್ (30) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಲೀಗ್ ನಾಯಕ ಇರ್ಷಾದ್ ಸೇರಿದಂತೆ ಮೂವರ ವಿರುದ್ಧ ಕಾಂಞಗಾಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಹ್ಮಾನ್ ಅವರನ್ನು ನಿನ್ನೆ ರಾತ್ರಿ ಮನೆಗೆ ತೆರಳುವ ವೇಳೆ ತಂಡವೊಂದು ಹತ್ಯೆ ಮಾಡಿತ್ತು.

- Advertisement -

ರಹ್ಮಾನ್ ಹತ್ಯೆ ಖಂಡಿಸಿ ಕಾಂಞಗಾಡ್ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ಇಂದು ಹರತಾಳ ನಡೆಯುತ್ತಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಮುಸ್ಲಿಂ ಲೀಗ್ ಮತ್ತು ಡಿವೈಎಫ್ ಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಈ ಕೊಲೆ ನಡೆದಿದೆ ಎಂದು ಸಿಪಿಎಂ ಆಪಾದಿಸಿದೆ.

ಇದೀಗ ಮುಸ್ಲಿಂ ಲೀಗ್ ನ ಯುವ ಘಟಕದ ನಾಯಕ ಇರ್ಷಾದ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ಇರ್ಷಾದ್ ಎಂಬಾತ ಕೂಡ ಗಾಯಗೊಂಡಿದ್ದು ಆತನನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎನ್ನಲಾಗಿದೆ.  

Join Whatsapp