Home ಟಾಪ್ ಸುದ್ದಿಗಳು ‘ಕೇರಳಿಗರು ಸುಶಿಕ್ಷಿತರು , ಹಾಗಾಗಿ ಅಲ್ಲಿ ಬಿಜೆಪಿ ಬೆಳೆದಿಲ್ಲ’ : ರಾಜ್ಯದ ಏಕೈಕ ಬಿಜೆಪಿ ಶಾಸಕ...

‘ಕೇರಳಿಗರು ಸುಶಿಕ್ಷಿತರು , ಹಾಗಾಗಿ ಅಲ್ಲಿ ಬಿಜೆಪಿ ಬೆಳೆದಿಲ್ಲ’ : ರಾಜ್ಯದ ಏಕೈಕ ಬಿಜೆಪಿ ಶಾಸಕ !

ಕೇರಳದಲ್ಲಿ 90 ಶೇಕಡಾ ಸಾಕ್ಷರತೆಯಿದೆ. ಹಾಗಾಗಿ ಕೇರಳದಲ್ಲಿ ಬಿಜೆಪಿ ಪಕ್ಷ ಇನ್ನೂ ಬೆಳೆದಿಲ್ಲ ಎಂದು ರಾಜ್ಯದ ಏಕೈಕ ಬಿಜೆಪಿ ಶಾಸಕ ಓ ರಾಜಗೋಪಾಲ್ ಹೇಳಿದ್ದಾರೆ. ಆ ಮೂಲಕ ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತರು ಯಾರೂ ಬಿಜೆಪಿಯನ್ನು ಬೆಂಬಲಿಸಲ್ಲ ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.

“ಕೇರಳ ಇತರೆ ರಾಜ್ಯಗಳಂತಲ್ಲ. ಅದೊಂದು ವಿಭಿನ್ನತೆಯಿಂದ ಕೂಡಿದ ರಾಜ್ಯವಾಗಿದೆ. ಇಲ್ಲಿ ಜನರು 90 ಶೇಕಡಾ ಸಾಕ್ಷರತೆಯಿಂದ ಕೂಡಿದ್ದಾರೆ. ಅವರು ಯೋಚಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ನಮಗೆ ಇದೊಂದು ಸಮಸ್ಯೆಯಾಗಿದೆ” ಎಂದು ಅವರು ಹೇಳಿದ್ದಾರೆ.

Join Whatsapp
Exit mobile version