ಹವಾಮಾನ ವೈಪರೀತ್ಯ | ದುಬೈಯಿಂದ ಮಂಗಳೂರಿಗೆ ಬಂದ ವಿಮಾನ ಕೊಚ್ಚಿಯಲ್ಲಿ ತುರ್ತು ಲ್ಯಾಂಡಿಂಗ್ !

Prasthutha|

ಮಂಗಳೂರು : ನಿನ್ನೆ ತಡ ರಾತ್ರಿ ಕರಾವಳಿ ಭಾಗದಲ್ಲಿ ಇದ್ದ ತೀವ್ರ ಮಳೆ ಗಾಳಿಯ ಕಾರಣದಿಂದಾಗಿ ದುಬೈಯಿಂದ ಮಂಗಳೂರಿಗೆ ಬರಬೇಕಾಗಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್ ಆದ ಘಟನೆ ನಡೆದಿದೆ. 118 ಪ್ರಯಾಣಿಕರೊಂದಿಗೆ ಮಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ IXE 384 ವಿಮಾನ ಮಂಗಳೂರಿನ ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿ ಇಳಿಯದೆ ಕೊಚ್ಚಿಯಲ್ಲಿ ತುರ್ತಾಗಿ ಇಳಿದಿದೆ.

- Advertisement -

ನಿನ್ನೆ ತಡರಾತ್ರಿ ಎರಡು ಗಂಟೆಗೆ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ. ಇಂದು ಬೆಳಗ್ಗೆ ಕೊಚ್ಚಿಯಿಂದ ವಿಮಾನ ಸುರಕ್ಷಿತವಾಗಿ ಮಂಗಳೂರಿನಲ್ಲಿ ಇಳಿದಿದ್ದು, ಪ್ರಯಾಣಿಕರು ನಿರಾಳರಾಗಿದ್ದಾರೆ.

Join Whatsapp