Home ಟಾಪ್ ಸುದ್ದಿಗಳು ಡಾ.ಕೆ ಸುಧಾಕರ್‌‌ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ, ಎಣ್ಣೆಗೆ ನೂಕುನುಗ್ಗಲು

ಡಾ.ಕೆ ಸುಧಾಕರ್‌‌ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ, ಎಣ್ಣೆಗೆ ನೂಕುನುಗ್ಗಲು

ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ.ಕೆ ಸುಧಾಕರ್‌‌ಗೆ ನೆಲಮಂಗಲದ ಹೊರವಲಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮದ್ಯ, ಮಾಂಸದೂಟಕ್ಕೆ ಜನರು ಮುಗಿಬಿದ್ದ ಘಟನೆ ನಡೆದಿದೆ.

ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು, ಬೆಂಬಲಿಗರಿಗೆ ಭರ್ಜರಿ ಬಾಡೂಟ (ಮಾಂಸದೂಟ) ಮಾಡಿಸಲಾಗಿತ್ತು. ನೆಲಮಂಗಲ ಅಲ್ಲದೇ ಚಿಕ್ಕಬಳ್ಳಾಪುರ ಬೇರೆ ಬೇರೆ ಕಡೆಯಿಂದ ಬೈಕ್‌ಗಳಲ್ಲಿ ಸಮಾವೇಶಕ್ಕೆ ಸಾವಿರಾರು ಜನರು ಬಂದಿದ್ದ. ಕಾರ್ಯಕ್ರಮ ನಡೆಯುವಾಗಲೇ ಜನರು ಬಾಡೂಟಕ್ಕೆ ಮುಗಿಬಿದ್ದಿದ್ದಾರೆ. ಇದರಿಂದಾಗಿ ನೂಕುನುಗ್ಗಲು ಉಂಟಾಗಿದೆ. ಜನರುಬಎಣ್ಣೆಗೂ ಮುಗಿಬಿದ್ದಿದ್ದು, ಈ ವೇಳೆ ನೂಕಾಟ ತಳ್ಳಾಟ ನಡೆಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Join Whatsapp
Exit mobile version