ನಾಯಿ ಕಟ್ಟಿಹಾಕಿ ಥಳಿತ: ದೂರು ದಾಖಲು

Prasthutha|

ಬೆಂಗಳೂರು: ಯುವಕರಿಬ್ಬರು ನಾಯಿಯನ್ನು ಹಗ್ಗದದಿಂದ ಕಟ್ಟಿ ಮನಸ್ಸೊ ಇಚ್ಚೆ ಥಳಿಸಿ, ವಿಕೃತಿ ಮೆರೆದಿರುವ ಘಟನೆ ಕೆ.ಆರ್‌.ಪುರಂನ‌  ಭಟ್ಟರಹಳ್ಳಿಯಲ್ಲಿ ನಡೆದಿದೆ‌.

- Advertisement -

ಭಟ್ಟರಹಳ್ಳಿಯ ಮಂಜುನಾಥ್ ಲೇಔಟ್​ ನಲ್ಲಿ ಮನೆಯಲ್ಲಿದ್ದ ತಮ್ಮ ನಾಯಿಗೆ ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಕನಿಕರವಿಲ್ಲದೇ ಥಳಿಸಿದ್ದಾರೆ.

ಹಗ್ಗ ಕಟ್ಟಿ ಶ್ವಾನದ ಮೇಲೆ ಹಲ್ಲೆ ನಡೆಸಿದ ಸಹೋದರರು ನಾಯಿಯನ್ನು ಕಟ್ಟಿಹಾಕಿ ದೊಣ್ಣೆಗಳಿಂದ ಹಲ್ಲೆ ಮಾಡಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.

- Advertisement -

ಗದ್ದುಗೆಪ್ಪ ಎಂಬುವರು ಸಾಕಿಕೊಂಡಿದ್ದ ನಾಯಿ ಮೇಲೆ ಹಲ್ಲೆ ಮಾಡಿ ಸಹೋದರರು ವಿಕೃತಿ ಮೆರೆದಿದ್ದಾರೆ. ಲೋಹಿತ್ ಕುಮಾರ್ ಹಾಗೂ ಅವನ ಸಹೋದರಿಂದ ನಾಯಿ ಹಲ್ಲೆ ನಡೆದಿದ್ದು, ಗದ್ದಿಗೆಪ್ಪ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Join Whatsapp