Home ಕರಾವಳಿ ರಾಹುಲ್ ಮೈಮುಟ್ಟುವ ತಾಕತ್ತು ನಿಮಗಿದೆಯೇ ಭರತ್ ಶೆಟ್ಟಿಯವರೇ?: ಗಿರೀಶ್ ಆಳ್ವ

ರಾಹುಲ್ ಮೈಮುಟ್ಟುವ ತಾಕತ್ತು ನಿಮಗಿದೆಯೇ ಭರತ್ ಶೆಟ್ಟಿಯವರೇ?: ಗಿರೀಶ್ ಆಳ್ವ

ಮಂಗಳೂರು: ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಶಾಸಕ ಭರತ್ ಶೆಟ್ಟಿ ವಿರುದ್ಧ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ ಕಿಡಿಗಾರಿದ್ದಾರೆ.

ರಾಹುಲ್ ಮೈಮುಟ್ಟುವ ತಾಕತ್ತು ನಿಮಗಿದೆಯೇ ಎಂದು ಪ್ರಶ್ನಿಸಿದ ಗಿರೀಶ್ ಆಳ್ವ, ಶಾಸಕರಾಗಲು ನೀವು ನಾಲಾಯಕ್ ಎಂದಿದ್ದಾರೆ.

ಸಂವಿಧಾನದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನೀವು ರಸ್ತೆ ಬದಿ ಪುಡಿ ರೌಡಿಗಳ ರೀತಿ ವರ್ತಿಸುತ್ತೀರಿ. ನಿಮ್ಮ ಚೇಲಾಗಳನ್ನು ಖುಷಿಪಡಿಸಲು ಈ ರೀತಿ ಅಸಂವಿಧಾನಿಕ ಮಾತುಗಳನ್ನಾಡುವುದನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ ಎಂದಿದ್ದಾರೆ.

ಈ ಜಿಲ್ಲೆಯ ಬಿಜೆಪಿ ಶಾಸಕರುಗಳು ತನ್ನ ಪಕ್ಷದೊಳಗೆ ನಾಯಕರಾಗಲು ಪೈಪೋಟಿಯಲ್ಲಿದ್ದಾರೆ. ಆದರೆ ನಿಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ನಿಮ್ಮ ಪೈಪೋಟಿ ತೋರಿಸಿ. ಈ ರೀತಿ ವಿವಾದತ್ಮಕ ಹೇಳಿಕೆಗಳಿಂದ ಅಲ್ಲ. ನಮ್ಮ ಯುವ ಕಾರ್ಯಕರ್ತರಿಗೂ ನಿಮ್ಮದೇ ಧಾಟಿಯಲ್ಲಿ ಉತ್ತರ ನೀಡಲು ಗೊತ್ತಿದೆ. ಆದರೆ ಇದು ನಮ್ಮ ಸಂಸ್ಕೃತಿಯಲ್ಲ ಎಂದು ಗಿರೀಶ್ ಆಳ್ವ ಪ್ರಕಟಣೆ ಮೂಲಕ ಹೇಳಿದ್ದಾರೆ.

Join Whatsapp
Exit mobile version