ಅದ್ಯಾರೋ ಸಚಿವರು ಸ್ವಾಮೀಜಿ ಅವರಿಗೆ ಸಿಡಿ ತೋರಿಸಲು ಹೋಗಿ ಉಗಿಸಿಕೊಂಡವ್ರೆ : ಡಿ.ಕೆ. ಶಿವಕುಮಾರ್

Prasthutha|

ದಾವಣಗೆರೆ : ಅಧಿಕಾರಕ್ಕೋಸ್ಕರ ಅದ್ಯಾರೋ ಸಚಿವರು ಸ್ವಾಮೀಜಿಗೆ ತೋರಿಸಲು ಮೈಸೂರಿಗೆ ಸೀಡಿ ತಗೊಂಡು ಹೋಗಿದ್ರಂತೆ. ಸ್ವಾಮೀಜಿ ಆ ಸಚಿವರನ್ನು ಚೆನ್ನಾಗಿ ಬೈದು ಕಳಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ಸಿ.ಪಿ. ಯೋಗೇಶ್ವರ ಹೆಸರು ಪ್ರಸ್ತಾಪಿಸದೇ ಹೊಸ ಬಾಂಬ್ ಸಿಡಿಸಿದ್ದಾರೆ.

- Advertisement -


ದಾವಣಗೆರೆ ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್ನಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿಡಿ ತೋರಿಸಲು ಮೈಸೂರಿಗೆ ಹೋಗಿದ್ದಂತಹ ಸಚಿವರಿಗೆ ಸ್ವಾಮೀಜಿ ಚೆನ್ನಾಗಿ ಬೈದು, ಉಗಿದು ಕಳಿಸಿದ್ದಾರೆ. ಸ್ವಾಮೀಜಿಗಳೊಬ್ಬರ ಬಳಿಗೆ ಸಿಡಿ ತೆಗೆದುಕೊಂಡು ಹೋಗಿದ್ದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.


ಅದೇನೋ ಸಿ.ಡಿ ಇದೆ ಎಂದು ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಹೇಳುತ್ತಿದ್ದಾರೆ. ಅದನ್ನೇ ಮೈಸೂರಿನಲ್ಲಿ ಸ್ವಾಮೀಜಿಗೆ ತೋರಿಸಲೆಂದು ಹೋಗಿದ್ದರಂತೆ ಅದೇ ಸಚಿವ ಯೋಗೇಶ್ವರ ಎಂದು ಅವರು ತಿಳಿಸಿದರು.
ಎಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ ಹೇಳಿ? ಎಲ್ಲಾ ಶಾಸಕರು ಏನು ಮಾಡುತ್ತಿದ್ದಾರೆ?. ಯಥಾ ರಾಜ, ತಥಾ ಪ್ರಜಾ ಎಂಬ ಮಾತಿದೆ. ಆದರೆ, ಯಥಾ ರಾಜ, ತಥಾ ಅಧಿಕಾರಿಗಳು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಸಚಿವರು, ಶಾಸಕರು ಹೇಗೆ ಕೆಲಸ ಮಾಡುತ್ತಾರೋ, ಅಧಿಕಾರಿಗಳೂ ಹಾಗೇ ಮಾಡುತ್ತಾರೆ ಎಂದು ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ಪಾಲಿಕೆ ಆಯುಕ್ತ ಶಿಲ್ಪಾ ಅವರ ಜಗಳ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

Join Whatsapp