ಸುರತ್ಕಲ್ ಟೋಲ್ ತೆರವಿಗೆ ಆದೇಶ ನೀಡಿದ ಜಿಲ್ಲಾಡಳಿತ: ಡಿಸೆಂಬರ್ 1ರಿಂದ ಅನಿರ್ದಿಷ್ಟಾವಧಿ ಹೋರಾಟ ಕೈಬಿಡಲು ನಿರ್ಧಾರ

Prasthutha|

ಮಂಗಳೂರು: ಅಕ್ರಮವಾಗಿ ನಿರ್ಮಿಸಲಾಗಿದ್ದ ಸುರತ್ಕಲ್ ಟೋಲ್’ಗೇಟ್ ಅನ್ನು ತೆರವುಗೊಳಿಸಲು ಜಿಲ್ಲಾಡಳಿತ ಆದೇಶ ನೀಡಿದ ಹಿನ್ನೆಲೆಯಲ್ಲಿ ಟೋಲ್’ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಡಿಸೆಂಬರ್ 1ರಿಂದ ಕೈಬಿಡುವುದಾಗಿ ಟೋಲ್’ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

- Advertisement -

ಅಲ್ಲದೆ ಹೆಜಮಾಡಿ ಟೋಲ್’ಗೇಟ್’ನಲ್ಲಿ ಹೆಚ್ಚುವರಿ ಶುಲ್ಕ ವಸೂಲಿಯನ್ನು ವಿರೋಧಿಸಿ ಡಿಸೆಂಬರ್ 2ರಿಂದ ಹೆಜಮಾಡಿಯಲ್ಲಿ ಹೋರಾಟ ಮುಂದುವರಿಸಲು ಈ ಸಮಿತಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Join Whatsapp