ಸಂಸದ ಸ್ಥಾನದಿಂದ ಅನರ್ಹ| ಸರ್ಕಾರಿ ಬಂಗಲೆ ತೊರೆಯುವಂತೆ ರಾಹುಲ್ ಗಾಂಧಿಗೆ ನೋಟಿಸ್

Prasthutha|

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ವಸತಿ ಸಮಿತಿಯು ನೋಟಿಸ್ ಜಾರಿಗೊಳಿಸಿದ್ದು, ತಮ್ಮ ಸರ್ಕಾರಿ ಬಂಗಲೆಯನ್ನು ಎಪ್ರಿಲ್ 22 ರೊಳಗೆ ತೊರೆಯುವಂತೆ ಸೂಚಿಸಿದೆ.

- Advertisement -

ಸಂಸದ ಸ್ಥಾನ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ತುಘಲಕ್ ಲೇನ್ ನಲ್ಲಿರುವ ಬಂಗಲೆಯನ್ನು ತೊರೆಯುವಂತೆ ಆದೇಶಿಸಲಾಗಿದೆ.

2004ರಲ್ಲಿ ರಾಹುಲ್‌ ಗಾಂಧಿ ಮೊದಲ ಬಾರಿಗೆ ಉತ್ತರ ಪ್ರದೇಶದ ಅಮೇಥಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾಗ ದೆಹಲಿಯ ಲುಟೇನ್ಸ್‌ನ ತುಘಲಕ್‌ ಲೇನ್‌ನ ನಂ.12 ವಸತಿಯನ್ನು ನೀಡಲಾಗಿತ್ತು.

Join Whatsapp