Home ಟಾಪ್ ಸುದ್ದಿಗಳು ದನ ಮೇಯಿಸಲು ಹೋಗಿದ್ದ ಅಣ್ಣ-ತಮ್ಮ ಕೃಷಿ ಹೊಂಡಕ್ಕೆ ಬಿದ್ದು ದಾರುಣ ಮೃತ್ಯು

ದನ ಮೇಯಿಸಲು ಹೋಗಿದ್ದ ಅಣ್ಣ-ತಮ್ಮ ಕೃಷಿ ಹೊಂಡಕ್ಕೆ ಬಿದ್ದು ದಾರುಣ ಮೃತ್ಯು

ವಿಜಯಪುರ: ಇಬ್ಬರು ಅಣ್ಣ- ತಮ್ಮಂದಿರು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದಲ್ಲಿ ನಡೆದಿದೆ.

ರಾಯಪ್ಪ ಬಸವರಾಜ ವಣಕಿಹಾಳ(12), ಮಾಳಿಂಗರಾಯ ಬಸವರಾಜ ವಣಕಿಹಾಳ (9) ಮೃತಪಟ್ಟ ಅಣ್ಣ ತಮ್ಮಂದಿರಾಗಿದ್ದಾರೆ.  

ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಯಪ್ಪ ಬಸವರಾಜ ವಣಕಿಹಾಳ(12), 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಾಳಿಂಗರಾಯ ಬಸವರಾಜ ವಣಕಿಹಾಳ (9) ಅವರು ಶಾಲೆ ಬಿಟ್ಟ ಮೇಲೆ ಮನೆಗೆ ಬಂದ ನಂತರ ದನ ಮೇಯಿಸಲು ತಮ್ಮ ಪಕ್ಕದ ಜಮೀನಿಗೆ ಹೋಗಿದ್ದು, ಅಲ್ಲಿರುವ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಮೊದಲು ಮಾಳಿಂಗರಾಯ ಕಾಲು ಜಾರಿ ಬಿದ್ದಿದ್ದಾನೆ. ತಮ್ಮನನ್ನು ರಕ್ಷಿಸಲು ರಾಯಪ್ಪನು ಕೃಷಿ ಹೊಂಡಕ್ಕೆ ಇಳಿದಿದ್ದುಇಬ್ಬರು ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನಾ ಸ್ಥಳಕ್ಕೆ ಬಸವನಬಾಗೇವಾಡಿಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version