ಗುರುವಾಯೂರ್ ದೇವಸ್ಥಾನದಲ್ಲಿ ಅಡುಗೆ ಕೆಲಸಕ್ಕೆ ಬ್ರಾಹ್ಮಣರೇ ಬೇಕೆಂದು ಸುತ್ತೋಲೆ ಹೊರಡಿಸಿದ ದೇವಸ್ವಂ ಮಂಡಳಿ

Prasthutha|

- Advertisement -

ತಿರುವನಂತಪುರಂ: ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ಅಡುಗೆ ಮಾಡುವವರು ಮತ್ತು ಸಹಾಯಕರು ಬ್ರಾಹ್ಮಣರಾಗಿರಬೇಕು ಎಂದು ದೇವಸ್ವಂ ಮಂಡಳಿ ಸುತ್ತೋಲೆ ಹೊರಡಿಸಿದೆ.

ಫೆಬ್ರವರಿಯಲ್ಲಿ ನಡೆಯಲಿರುವ ದೇವಸ್ಥಾನದ ಉತ್ಸವಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗಿತ್ತು.

- Advertisement -

ಅಡುಗೆ ಮಾಡಲು ಬರುವ ಬಾಣಸಿಗರು ಮತ್ತು ಸಹಾಯಕರು ಬ್ರಾಹ್ಮಣರಾಗಿರಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅಡುಗೆ ಮಾಡಲು ಬರುವವರು ಶುಚಿಯಾಗಿರಬೇಕು ಮತ್ತು ಯಾವುದೇ ಕಳಂಕಗಳಿಲ್ಲದೆ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Join Whatsapp
Exit mobile version