ದಿಲ್ಲಿ ಗಲಭೆಯಲ್ಲಿ ಕಣ್ಣಿಗೆ ಹಾನಿ: ಎಫ್.ಐ.ಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ

Prasthutha|

ಹೊಸದಿಲ್ಲಿ: ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದಿಲ್ಲಿಯಲ್ಲಿ ಮುಸ್ಲಿಮ್ ವಿರೋಧಿ ಗಲಭೆಯ ವೇಳೆ ಗುಂಡೇಟಿನಲ್ಲಿ ವ್ಯಕ್ತಿಯೋರ್ವರ ಕಣ್ಣಿಗೆ ಏಟಾದ ಪ್ರಕರಣದ ಎಫ್.ಐ.ಆರ್ ದಾಖಲಿಸುವಂತೆ ದಿಲ್ಲಿ ಕೋರ್ಟ್ ಸೂಚಿಸಿದೆ.

- Advertisement -

ಗಲಭೆಯ ವೇಳೆ ನರೇಶ್ ತ್ಯಾಗಿ, ಸುಭಾಶ್ ತ್ಯಾಗಿ, ಉತ್ತಮ್ ತ್ಯಾಗಿ ಮತ್ತು ಸುಶೀಲ್ ನೇತೃತ್ವದ ತಂಡವೊಂದು ತನ್ನ ಮೇಲೆ ದಾಳಿ ನಡೆಸಿತು ಎಂದು ಆರೋಪಿಸಿದ ಮುಹಮ್ಮದ್ ನಾಸೀರ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ಕರ್ದೂಮ ನ್ಯಾಯಾಲಯ ನಡೆಸಿತು.

ಅಕ್ಟೋಬರ್ 21ರಂದು ಈ ಕುರಿತು ಆದೇಶವನ್ನು ನೀಡಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಿಚಾ ಮಣಿಚಂದ, ಆದೇಶ ದೊರೆತ 24 ಗಂಟೆಯೊಳಗಾಗಿ ಪ್ರಕರಣವನ್ನು ದಾಖಲಿಸುವಂತೆ ಭಜನ್ ಪುರ ಪೊಲೀಸ್ ಠಾಣೆಯ ಎಸ್.ಎಚ್.ಒ ಗೆ ಸೂಚನೆ ನೀಡಿದ್ದಾರೆ.

- Advertisement -

ಆದರೆ ತಟಸ್ಥ ಸಂಸ್ಥೆಯೊಂದು ಪ್ರಕರಣದ ತನಿಖೆ ನಡೆಸಬೇಕೆಂಬ ನಾಸೀರ್ ರ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅದು ಮ್ಯಾಜಿಸ್ಟ್ರೇಟ್ ಕೋರ್ಟ್ ನ ವ್ಯಾಪ್ತಿಗೆ ಬರುವುದಿಲ್ಲ ಎಂದಿದೆ.

Join Whatsapp