ಪ್ರವಾದಿ ನಿಂದನೆ | ದೆಹಲಿ ಪೊಲೀಸರಿಂದ ಯತಿ ನರಸಿಂಗಾನಂದ್ ಸರಸ್ವತಿಗೆ ಸಮನ್ಸ್

Prasthutha|

ಹೊಸದಿಲ್ಲಿ: ಪ್ರವಾದಿ ಮುಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಯತಿ ನರಸಿಂಗಾನಂದ ಸರಸ್ವತಿಗೆ ದೆಹಲಿ ಪೊಲೀಸ್ ಸಮನ್ಸ್ ಜಾರಿಗೊಳಿಸಿದೆ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ (ಹೊಸದಿಲ್ಲಿ) ಈಶ್ ಸಿಂಘಾಲ್ ಹೇಳಿದ್ದಾರೆ.

- Advertisement -

ಗಾಝಿಯಾಬಾದ್‌ನ ದಸ್ನಾ ದೇವಿ ದೇವಾಲಯದ ಅರ್ಚಕ ನರಸಿಂಗಾನಂದ ಸರಸ್ವತಿ ಅವರು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಪತ್ರಿಕಾಗೋಷ್ಠಿಯಲ್ಲಿ ನಿಂದನಾತ್ಮಕ ಹೇಳಿಕೆ ನೀಡಿದ್ದರು. ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಪದೇ ಪದೇ ಬೆಂಬಲಿಸುತ್ತಿರುವ  ನರಸಿಂಗಾನಂದ ಹಲವು ಬಾರಿ ಇದೇ ರೀತಿಯ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದರು.  ದೆಹಲಿ ಪೊಲೀಸರು ನರಸಿಂಗಾನಂದ ವಿರುದ್ಧ ಐಪಿಸಿ ಸೆಕ್ಷನ್ 153 ಎ ಮತ್ತು 295 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

Join Whatsapp