Home ಟಾಪ್ ಸುದ್ದಿಗಳು ನವದೆಹಲಿ । ಗೋಹತ್ಯೆ ಶಂಕೆಯಲ್ಲಿ ಸಂಘಪರಿವಾರದಿಂದ ಕಾರ್ಮಿಕನ ಹತ್ಯೆ

ನವದೆಹಲಿ । ಗೋಹತ್ಯೆ ಶಂಕೆಯಲ್ಲಿ ಸಂಘಪರಿವಾರದಿಂದ ಕಾರ್ಮಿಕನ ಹತ್ಯೆ

ನವದೆಹಲಿ: ಫಾರ್ಮ್ ಹೌಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನನ್ನು ಸಂಘಪರಿವಾರದ ಗುಂಪೊಂದು ಗೋಹತ್ಯೆಯ ಶಂಕೆಯಲ್ಲಿ ಅಮಾನುಷವಾಗಿ ಥಳಿಸಿ ಹತ್ಯೆ ನಡೆಸಿದೆ.

ರಾಜಾರಾಮ್ ಎಂಬಾತನೇ ಹತ್ಯೆಯಾದ ವ್ಯಕ್ತಿಯಾಗಿದ್ದು, ಆತನ ಇಬ್ಬರು ಸ್ನೇಹಿತರು ಈ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಸ್ಥಳೀಯ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಸಂಘಪರಿವಾರದ ಕಾರ್ಯಕರ್ತರಿಂದ ದಾಳಿಗೊಳಗಾದವರು ನೀಡಿದ ದೂರಿನನ್ವಯ ಐವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರಸಕ್ತ ಮೃತರು ಸೇರಿದಂತೆ ಸಂತ್ರಸ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

Join Whatsapp
Exit mobile version