Home ಕರಾವಳಿ ಮುಡಿಪು: ಇಂದು “ಅಂಧಕಾರದಿಂದ ಪ್ರಕಾಶದೆಡೆಗೆ” ಧಾರ್ಮಿಕ ಕಾರ್ಯಕ್ರಮ

ಮುಡಿಪು: ಇಂದು “ಅಂಧಕಾರದಿಂದ ಪ್ರಕಾಶದೆಡೆಗೆ” ಧಾರ್ಮಿಕ ಕಾರ್ಯಕ್ರಮ

ಮುಡಿಪು: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ® ಮಂಗಳೂರು (SKSM) ಇದರ ದೇರಳಕಟ್ಟೆ ಘಟಕದ ಆಶ್ರಯದಲ್ಲಿಅಂಧಕಾರದಿಂದ ಪ್ರಕಾಶದೆಡೆಗೆಎಂಬ ಧ್ಯೇಯ ವಾಕ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವು ಇದೇ ಬರುವ 16-2-2024 ಶುಕ್ರವಾರ ಮಗ್ರೀಬ್ ನಮಾಝ್ ನಂತರ ತೊಡಗಿ ರಾತ್ರಿ ಗಂಟೆ 10:00 ರವರೆಗೆ ಮುಡಿಪು ಪಂಚಾಯತ್ ಮೈದಾನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಉಸ್ತಾದ್ ಮುಸ್ತಫಾ ದಾರಿಮಿಯವರು ಬ್ಯಾರಿ ಭಾಷೆಯಲ್ಲಿ ಅಮಲು ಪದಾರ್ಥಕ್ಕೆ ಬಲಿಯಾಗುತ್ತಿರುವ ಯುವ ಸಮೂಹ ಎಂಬ ವಿಷಯದಲ್ಲಿಯೂ, ಮೌಲವಿ:ಉನೈಸ್ ಪಾಪಿನಶ್ಶೇರಿಯವರು ಮಲಯಾಳಂ  ಭಾಷೆಯಲ್ಲಿ ಸಿರಾತೇ ಮುಸ್ತಖೀಮ್ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನಾಬ್ ಬಶೀರ್ ಶಾಲಿಮಾರ್, ಜನಾಬ್ ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಜನಾಬ್ ಮುಹಮ್ಮದ್ ಯಾಸೀನ್ ಭಾಗವಹಿಸಲಿದ್ದಾರೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 

Join Whatsapp
Exit mobile version