ಅಕ್ರಮ ಮರಳುಗಾರಿಕೆ ತಡೆದ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ !

Prasthutha|

ಬಳ್ಳಾರಿ: ಅಕ್ರಮ ಮರಳುಗಾರಿಕೆ ತಡೆದ ಅಧಿಕಾರಿಯ ಮನೆಗೆ ನುಗ್ಗಿ, ಕೊಲೆಗೆ ಯತ್ನಿಸಿರುವ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ.

- Advertisement -


ಮಂಗಳವಾರ ರಾತ್ರಿ ತಲಮಾಮಿಡಿ ಬಳಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿತ್ತು. ಈ ವೇಳೆ ಬಳ್ಳಾರಿ ಗ್ರಾಮೀಣ ಭಾಗದ ಆರ್ ಐ ವೆಂಕಟಸ್ವಾಮಿ ಇದನ್ನು ತಡೆದಿದ್ದರು. ಈ ವೇಳೆ ದಂಧೆಕೋರರು ಹಾಗೂ ವೆಂಕಟಸ್ವಾಮಿ ನಡುವೆ ವಾಗ್ವಾದವೂ ನಡೆದಿತ್ತು. ಇದ್ಯಾವುದಕ್ಕೂ ಬಗ್ಗದ ವೆಂಕಟಸ್ವಾಮಿ ಕಾನೂನು ಕ್ರಮ ಕೈಗೊಂಡಿದ್ದರು.


ಇದನ್ನೇ ನೆಪ ಮಾಡಿಕೊಂಡು ನಾಲ್ವರು ತಮ್ಮ ಸಹಚರರೊಂದಿಗೆ ವೆಂಕಟಸ್ವಾಮಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ವೆಂಕಟಸ್ವಾಮಿ, ಅವರ ಪತ್ನಿ ಹಾಗೂ ಮಗನಿಗೆ ಗಾಯಗಳಾಗಿವೆ. ಈ ಕುರಿತು ವೆಂಕಟಸ್ವಾಮಿ ದೂರು ದಾಖಲಿಸಿದ್ದಾರೆ

Join Whatsapp