ಚಿಂತೆಯಲ್ಲಿಯೇ ಠಾಣೆಯಲ್ಲಿ ರಾತ್ರಿ ಕಳೆದ ದರ್ಶನ್

Prasthutha|

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಸ್ಟಾರ್ ನಟ ನಟ ದರ್ಶನ್ ಮತ್ತು 12 ಮಂದಿಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ಪೊಲೀಸರು ಬೆಡ್ ಶೀಟ್, ಕಾರ್ಪೆಟ್ ವ್ಯವಸ್ಥೆ ಮಾಡಿದ್ದಾರೆ. ಆದರೆ ದರ್ಶನ್ ನಿದ್ರಿಸದೇ ಚಿಂತೆಯಲ್ಲೇ ರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ. ಪವಿತ್ರಾ ಗೌಡ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ.

- Advertisement -

ತಲೆನೋವು, ಮೈ ಕೈ ನೋವು ಎಂದು ಕೆಲವರು ಹೇಳಿಕೊಂಡಿದ್ದು, ಮಾತ್ರೆ ತರಿಸಿಕೊಡಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ರಾತ್ರಿ ಎಚ್ಚರಗೊಂಡು ಎದ್ದು ಕುಳಿತಿದ್ದರು. ಬಂಧನದಿಂದ ಚಿಂತಾಕ್ರಾಂತನಾಗಿರುವ ದರ್ಶನ್ ರಾತ್ರಿ ಎದ್ದು ಕುಳಿತುಕೊಂಡಿದ್ದರು ಎನ್ನಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಮುಂಭಾಗ ಕೆಎಸ್‌ಆರ್ಪಿ ಭದ್ರತೆ ನೀಡಲಾಗಿದೆ.

Join Whatsapp
Exit mobile version