Home ಟಾಪ್ ಸುದ್ದಿಗಳು ಋಣ ತೀರಿಸಲು ಕಾಂಗ್ರೆಸ್ ಪರ ಪ್ರಚಾರ: ನಟ ದರ್ಶನ್

ಋಣ ತೀರಿಸಲು ಕಾಂಗ್ರೆಸ್ ಪರ ಪ್ರಚಾರ: ನಟ ದರ್ಶನ್

ಮದ್ದೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಅಪಾರ ಸಹಾಯ ಮಾಡಿದ್ದಾರೆ. ಆ ಋಣ ನನ್ನ ಮೇಲಿದ್ದು ಈ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಪರ ಪ್ರಚಾರ ನಡೆಸುತ್ತಿದ್ದೇನೆ ಎಂದು ನಟ ದರ್ಶನ್ ಹೇಳಿದರು.


ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ತೆರೆಯ ಹಿಂದೆ ಕಾಂಗ್ರೆಸ್ ನಾಯಕರು ನಮಗೆ ಸಹಾಯ ಮಾಡಿದ್ದರು. ಆ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಇಲ್ಲಿರುವ ಕೆಲವು ನಾಯಕರುಗಳು ನನಗೆ ಈ ಹಿಂದೆ ಮಾಡಿದ ಸಹಾಯವನ್ನು ಹಾಗೂ ಋಣವನ್ನು ತೀರಿಸಲು ಆಗುವುದಿಲ್ಲ. ಅವರಿಗೋಸ್ಕರ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದೇನೆ ಎಂದರು.
ಸ್ಟಾರ್ ಚಂದ್ರು ಮಂಡ್ಯ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತಾರೆ. ಉತ್ತಮ ವ್ಯಕ್ತಿತ್ವದ ಅವರು ಜನರಿಗೆ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದರು.

Join Whatsapp
Exit mobile version