Home ಟಾಪ್ ಸುದ್ದಿಗಳು ಹರತಾಳದ ವೇಳೆ ಹಾನಿ: 5 ಕೋಟಿ ರೂ. ಠೇವಣಿ ಇಡುವಂತೆ PFIಗೆ ಕೇರಳ ಹೈಕೋರ್ಟ್ ನಿರ್ದೇಶನ

ಹರತಾಳದ ವೇಳೆ ಹಾನಿ: 5 ಕೋಟಿ ರೂ. ಠೇವಣಿ ಇಡುವಂತೆ PFIಗೆ ಕೇರಳ ಹೈಕೋರ್ಟ್ ನಿರ್ದೇಶನ

ತಿರುವನಂತಪುರಂ: ಸೆಪ್ಟೆಂಬರ್ 23ರಂದು ಕೇರಳದಲ್ಲಿ PFI ಕರೆ ನೀಡಿದ್ದ ಹರತಾಳದ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ PFI ಸಂಘಟನೆ 5.20 ಕೋಟಿ ರೂ. ಠೇವಣಿ ಇಡಬೇಕು ಎಂದು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ಮಾಡಿದೆ.

ಎರಡು ವಾರದೊಳಗೆ ಕೇರಳ ಸರ್ಕಾರಕ್ಕೆ ಈ ಹಣವನ್ನು ಪಾವತಿಸುವಂತೆ ಸೂಚಿಸಿದೆ. ಇದೇ ವೇಳೆ ಜನರ ಜೀವವನ್ನು ಗಂಡಾಂತರಕ್ಕೆ ದೂಡಿಬಾರದು ಎಂದು ಹೈಕೋರ್ಟ್ ಹೇಳಿದೆ.
ಸೆಪ್ಟೆಂಬರ್ 22ರಂದು ದೇಶಾದ್ಯಂತ PFI ಸಂಘಟನೆಯ ಕಚೇರಿಗಳ ಮೇಲೆ ರೇಡ್ ಮಾಡಿದ್ದ NIA, ಹಲವಾರು PFI ನಾಯಕರನ್ನು ಬಂಧಿಸಿತ್ತು. ಈ ರೇಡ್ ಮತ್ತು ಬಂಧನವನ್ನು ವಿರೋಧಿಸಿ PFI ಕೇರಳ ಘಟಕ ಸೆಪ್ಟೆಂಬರ್ 23ರಂದು ಹರತಾಳಕ್ಕೆ ಕರೆ ನೀಡಿತ್ತು.

ಸೆಪ್ಟೆಂಬರ್ 23ರ ಹರತಾಳದ ದಿನ ಕೇರಳದ ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿತ್ತು. ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟವಾಗಿತ್ತು. ಈ ಸಂಬಂಧ ಕೇರಳ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಮುಹಮ್ಮದ್ ನಿಯಾಸ್ ಸಿ.ಪಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು.

ಈಗಾಗಲೇ PFI ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿದ್ದು, ಕೇರಳ PFI ಘಟಕ ವಿಸರ್ಜನೆಯಾಗಿದೆ.

Join Whatsapp
Exit mobile version