Home ಟಾಪ್ ಸುದ್ದಿಗಳು ಚುನಾವಣೆಯಲ್ಲಿ ಸೋಲು| ದಲಿತ ಯುವಕರಿಂದ ಉಗುಳು ನೆಕ್ಕಿಸಿ ಚಿತ್ರಹಿಂಸೆ ನೀಡಿದ ಅಭ್ಯರ್ಥಿ!

ಚುನಾವಣೆಯಲ್ಲಿ ಸೋಲು| ದಲಿತ ಯುವಕರಿಂದ ಉಗುಳು ನೆಕ್ಕಿಸಿ ಚಿತ್ರಹಿಂಸೆ ನೀಡಿದ ಅಭ್ಯರ್ಥಿ!

ಔರಂಗಾಬಾದ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಅಭ್ಯರ್ಥಿಯೊಬ್ಬ ದಲಿತ ಯುವಕರಿಗೆ ಚಿತ್ರಹಿಂಸೆ ನೀಡಿ ಉಗುಳು ನೆಕ್ಕಿಸಿದ ಘಟನೆ ಬಿಹಾರದಿಂದ ವರದಿಯಾಗಿದೆ.

ಈ ಕುರಿತ ವಿಡಿಯೋ ವ್ಯಾಪಕ ವೈರಲಾಗಿದ್ದು, ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಹಾರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲನುಭವಿಸಿದ ಬಲವಂತ್ ಸಿಂಗ್ ಬಂಧಿತ ಆರೋಪಿ. ತನ್ನ ಸೋಲಿಗೆ ದಲಿತ ಸಮುದಾಯವೇ ಕಾರಣ ಆರೋಪಿಸಿದ ಬಲವಂತ್, ದಲಿತ ಯುವಕರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ.





ದಲಿತ ಯುವಕರಿಗೆ ಮತ ಹಾಕಲು ಹಣ ನೀಡಿದರೂ ಅವರು ತನಗೆ ಮತ ಹಾಕಿಲ್ಲ ಎಂದು ಬಲವಂತ್ ಆರೋಪಿಸಿದ್ದಾನೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕಾಂತೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

Join Whatsapp
Exit mobile version