Home ಟಾಪ್ ಸುದ್ದಿಗಳು ತಮಿಳುನಾಡು | ದಲಿತ ಯುವಕನಿಗೆ ಹಲ್ಲೆಗೈದು, ಮೂತ್ರ ಮಾಡಿದ ಜಾತಿವಾದಿ ಉಗ್ರರು

ತಮಿಳುನಾಡು | ದಲಿತ ಯುವಕನಿಗೆ ಹಲ್ಲೆಗೈದು, ಮೂತ್ರ ಮಾಡಿದ ಜಾತಿವಾದಿ ಉಗ್ರರು

ಚೆನ್ನೈ : ತಮಿಳುನಾಡು ಪಡುಕೋಟೈ ಜಿಲ್ಲೆಯಲ್ಲಿ ದಲಿತ ಯುವಕನೊಬ್ಬನಿಗೆ ಹಲ್ಲೆ ನಡೆಸಿ, ಕಿರುಕುಳ ನೀಡಿದ ಬಗ್ಗೆ ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ನಿಂದನಾತ್ಮಕ ಪದವೊಂದನ್ನು ವಿರೋಧಿಸಿದುದಕ್ಕಾಗಿ ದುಷ್ಕರ್ಮಿಗಳು ತನ್ನ ಮೇಲೆ ಹಲ್ಲೆ ಮಾಡಿ, ಮೂತ್ರ ಮಾಡಿದ್ದಾರೆ ಎಂದು 18ರ ಹರೆಯದ ದಲಿತ ಯುವಕ ಆಪಾದಿಸಿದ್ದಾರೆ.

ಯುವಕ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಥನಿಕೊಂಡನ್ ಗ್ರಾಮದಲ್ಲಿ ತನ್ನ ಸ್ನೇಹಿತನೊಂದಿಗೆ ಮೀನು ಹಿಡಿಯುತ್ತಿದ್ದಾಗ ಪ್ರದೀಪ್ ಎಂಬಾತನೊಂದಿಗೆ ಜಗಳ ಆರಂಭವಾಗಿತ್ತು.

ಪ್ರದೀಪ್ ತನ್ನ ಜಾತಿ ಬಗ್ಗೆ ನಿಂದನಾತ್ಮಕ ಪದ ಬಳಸಿದ, ಅದನ್ನು ವಿರೋಧಿಸಿದ್ದೆ ಎಂದು ದಲಿತ ಯುವಕ ಹೇಳಿದ್ದಾರೆ. ಪ್ರದೀಪ್ ಮತ್ತು ಆತನ ಸ್ನೇಹಿತರು ತನ್ನನ್ನು ನಿರ್ಜನ ಪ್ರದೇಶಕ್ಕೆ ತಮ್ಮ ಕಾರಿನಲ್ಲಿ ಎಳೆದೊಯ್ದು ಹಲ್ಲೆ ಮಾಡಿದ್ದಾರೆ. ಪ್ರದೀಪ್ ಮತ್ತು ಆತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರನ್ನೂ ಬಂಧಿಸಲಾಗಿದೆ.

Join Whatsapp
Exit mobile version