Home ಟಾಪ್ ಸುದ್ದಿಗಳು ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ; ಆರ್.ಎಸ್.ಎಸ್ ಕೈವಾಡ ಶಂಕೆ

ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ; ಆರ್.ಎಸ್.ಎಸ್ ಕೈವಾಡ ಶಂಕೆ

ಕಣ್ಣೂರು: ಸಿ.ಪಿ.ಐ.ಎಂ ಕಾರ್ಯಕರ್ತನನ್ನುಹತ್ಯೆ ಮಾಡಲಾದ ಘಟನೆ ತಲಶ್ಶೇರಿ ನ್ಯೂ ಮಾಹಿ (New Mahe) ಬಳಿಯ ಪುನ್ನೋಲ್ ನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಪುನ್ನೋಲ್ ಮೂಲದ ಮೀನುಗಾರ  ಹರಿದಾಸನ್  ಎಂದು ತಿಳಿದು ಬಂದಿದೆ. ಬೆಳಗ್ಗಿನ ಜಾವ  ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ನಾಲ್ವರ ಗುಂಪೊಂದು ಹರಿದಾಸನ್ ರನ್ನು ಹತ್ಯೆ ಮಾಡಿದೆ. ಇದರ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ಸ್ಥಳೀಯ ಸಿ.ಪಿ.ಐ.ಎಂ. ನಾಯಕರು  ಆರೋಪಿಸಿದ್ದಾರೆ.

ಮನೆಯ ಬಳಿ ದಾಳಿ ನಡೆದಿದ್ದರಿಂದ ಗದ್ದಲ ಕೇಳಿ  ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದು, ಹತ್ಯೆಯನ್ನು  ತಡೆಯಲು ಯತ್ನಿಸಿದ ಹರಿದಾಸನ್ ಸಹೋದರ ಸುರ ಎಂಬವರಿಗೂ ಗಾಯಗಳಾಗಿವೆ.ಗಾಯಗೊಂಡು ತೀವ್ರ ಅಸ್ವಸ್ಥನಾಗಿದ್ದ ಹರಿದಾಸನ್ ರನ್ನು ಆಸ್ಪತ್ರೆಗೆ ತಲುಪಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹ  ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿದೆ.

ಒಂದು ವಾರದ ಹಿಂದೆ ಪುನ್ನೋಲ್ ಪ್ರದೇಶದಲ್ಲಿ ಸಿ.ಪಿ.ಐ.ಎಂ. ಬಿಜೆಪಿ ಮಧ್ಯೆ ನಡೆದಿದ್ದಘರ್ಷಣೆಯ ಹಿನ್ನೆಲೆಯಲ್ಲಿ ಹರಿದಾಸನ್ ರ ಹತ್ಯೆ ನಡೆದಿದ್ದು,ಇದು ಬಿಜೆಪಿ-ಆರ್ ಎಸ್ ಎಸ್ ನಾಯಕತ್ವದ ಯೋಜಿತ ಕೊಲೆಯಾಗಿದೆ ಎಂದು ಸಿಪಿಐ-ಎಂ ಆರೋಪಿಸಿದೆ.

Join Whatsapp
Exit mobile version