Home ಟಾಪ್ ಸುದ್ದಿಗಳು ಗೋಹತ್ಯೆ ಆರೋಪಿ ರಕ್ಷಣೆ| ನಾಲ್ವರು ಪೊಲೀಸರು ಅಮಾನತು

ಗೋಹತ್ಯೆ ಆರೋಪಿ ರಕ್ಷಣೆ| ನಾಲ್ವರು ಪೊಲೀಸರು ಅಮಾನತು

ಫತೇಪುರ : ಗೋಹತ್ಯೆ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ ಆರೋಪದ ಮೇಲೆ ನಾಲ್ವರು ಪೊಲೀಸರನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಅಮಾನತಿಗೊಳಗಾದ ಪೊಲೀಸರನ್ನು ಸಬ್ ಇನ್ಸ್ಪೆಕ್ಟರ್ ಶಮಿ ಆಶ್ರಪ್ ಹಾಗೂ ಅನೀಶ್ ಕುಮಾರ್ ಸಿಂಗ್, ಮುಖ್ಯಪೇದೆ ಮನೋಜ್ ಕುಮಾರ್ ಹಾಗೂ ಪೇದೆ ರಾಜೇಶ್ ತಿವಾರಿ ಎಂದು ಗುರುತಿಸಲಾಗಿದೆ.  

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್, ನಾಲ್ವರು ಪೊಲೀಸರು ಗೋಹತ್ಯೆ ಆರೋಪಿಯನ್ನು ಬಚಾವ್ ಮಾಡಲು ಯತ್ನಿಸಿದ್ದರು. ಆದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version