Home ಟಾಪ್ ಸುದ್ದಿಗಳು ಸಮಯ ಪ್ರಜ್ಞೆ ತೋರಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯ ಪ್ರಾಣ ಉಳಿಸಿದ ಕಾನ್ ಸ್ಟೇಬಲ್

ಸಮಯ ಪ್ರಜ್ಞೆ ತೋರಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯ ಪ್ರಾಣ ಉಳಿಸಿದ ಕಾನ್ ಸ್ಟೇಬಲ್

ಹೈದರಾಬಾದ್ , ಅಗಸ್ಟ್ 1: ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ರೈಲ್ವೇ ಭದ್ರತಾ ಪಡೆ (ಆರ್.ಪಿ.ಎಫ್)ಯ ಕಾನ್ ಸ್ಟೇಬಲ್ ದಿನೇಶ್ ಸಿಂಗ್ ಅವರ ಸಮಯ ಪ್ರಜ್ಞೆಯ ನಡೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದ್ದು, ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶನಿವಾರ ರಾತ್ರಿ ರೈಲು ಹತ್ತುವ ಸಲುವಾಗಿ ಮಹಿಳೆ ಸಿಕಂದರಾಬಾದ್ ರೈಲ್ವೇ ನಿಲ್ದಾಣ ತಲುಪಿದ್ದಳು. ಆದರೇ ಪ್ಲಾಟ್ ಫಾರ್ಮ್ ತಲುಪುವ ಹೊತ್ತಿಗೆ ರೈಲು ಚಲಿಸಲು ಆರಂಭಿಸಿದೆ. ರೈಲು ಹೊರಟ ಹಿನ್ನೆಲೆಯಲ್ಲಿ ಆತುರದಿಂದ ರೈಲು ಹತ್ತಲು ಯತ್ನಿಸಿದ ಮಹಿಳೆ ರೈಲು ಮತ್ತು ಪ್ಲಾಟ್‌ ಫಾರ್ಮ್ ನಡುವೆ ಸಿಲುಕಿ ಕೆಳಗೆ ಬಿದ್ದಿದ್ದಾರೆ.

ಈ ಅನಾಹುತವನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಕಾನ್ ಸ್ಟೇಬಲ್ ತಕ್ಷಣ ಮಹಿಳೆಯ ರಕ್ಷಣೆಗೆ ಧಾವಿಸಿದರು. ಮಾತ್ರವಲ್ಲದೇ ಮಹಿಳೆಯನ್ನು ಸುರಕ್ಷಿತವಾಗಿ ಎಳೆದು ಹಾಕಿದರು.
ಅಪಾಯದಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಕಾನ್ ಸ್ಟೇಬಲ್ ಅನ್ನು ರೈಲ್ವೇ ಅಧಿಕಾರಿಗಳು ಮತ್ತು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಕಾನ್ ಸ್ಟೇಬಲ್ ಅವರ ಈ ಸಾಹಸಿ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Join Whatsapp
Exit mobile version