ಕಾಂಗ್ರೆಸ್ ಸರಕಾರದಿಂದ ತಮಿಳುನಾಡು ಸಿಎಂ ಸ್ಟಾಲಿನ್‌ಗೂ ನೀರು ಫ್ರೀ : ಸಿ‌.ಟಿ ರವಿ

Prasthutha|

ಬೆಂಗಳೂರು: ಚುನಾವಣೆ ಪೂರ್ವದಲ್ಲಿ ಉಚಿತ ಘೋಷಣೆಗಳನ್ನು ಮಾಡಿದ್ದ ಕಾಂಗ್ರೆಸ್, ನನಗೂ ಫ್ರೀ ನಿನಗೂ ಫ್ರೀ ಎಂದು ಹೇಳಿತ್ತು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ ಅವರು ಕಾವೇರಿ ನೀರಿನ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

- Advertisement -

ಮಹದೇವಪ್ಪ ನಿನಗೂ ಫ್ರೀ ಕಾಕಾಪಾಟೀಲ್ ನಿನಗೂ ಫ್ರೀ ಅಂತಾ ಹೇಳಿದ್ದರು. ಈಗ ಕಾಂಗ್ರೆಸ್​ ತಮಿಳುನಾಡು ಸಿಎಂ ಸ್ಟಾಲಿನ್​ಗೂ ನೀರು ಫ್ರೀ ಎಂದಿದೆ ಎಂದರು.

ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಬಗ್ಗೆ ಲೇವಡಿ ಮಾಡಿದ ಸಿ.ಟಿ.ರವಿ, ತಮಿಳುನಾಡು ತಮ್ಮ ಬೆಳೆಗೆ ನೀರು ಕೇಳುತ್ತಿದೆ. ಆದರೆ ನಮಗೆ ಕುಡಿಯಲು ನೀರಿಲ್ಲ. ಪ್ರಗತಿಪರರ ನಿರ್ಣಯದ ಹೋರಾಟಕ್ಕೆ ನಮ್ಮ ಬೆಂಬಲವಿರಲಿದೆ. ಸೆ.26ರ ಬೆಂಗಳೂರು ಬಂದ್​ಗೆ ಬಿಜೆಪಿ ಬೆಂಬಲ ನೀಡಲಿದೆ. ಕುರುಬೂರು ಶಾಂತಕುಮಾರ್ ನೇತೃತ್ವದ ಬಂದ್‌ಗೆ ಬಿಜೆಪಿ ಬೆಂಬಲ ನೀಡಲಿದೆ ಎಂದರು.

- Advertisement -

ಬೆಂಗಳೂರು ಬಂದ್​ ಬೆಂಬಲಿಸುವಂತೆ ಕಾರ್ಯಕರ್ತರಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದ ಸಿಟಿ ರವಿ, ಶಾಂತಿ ಕಾಪಾಡಿಕೊಂಡು ತಾವೆಲ್ಲರೂ ಚಳುವಳಿಯಲ್ಲಿ ಭಾಗವಹಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದ್ದು ನೀವೆ ಅಲ್ವಾ. ಜನ ನಿಮಗೆ ಮತ ನೀಡಿದ್ದಾರೆ ಅಲ್ವಾ? ಮತ್ತೆ ನೀವ್ಯಾಕೆ ನೀರು ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ತಮಿಳುನಾಡು ಕೇಳುವ ಮೊದಲೇ ನೀವು ಯಾಕೆ ನೀರು ಬಿಟ್ಟಿರಿ? ಇಂಡಿಯಾ ಮೈತ್ರಿಕೂಟ ಉಳಿಸಿಕೊಳ್ಳಲು ರಾಜ್ಯದ ಹಿತ ಬಲಿ ಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಸಿಟಿ ರವಿ, ವಾಡಿಕೆ ಮಳೆಗಿಂತ ಶೇ.42 ರಷ್ಟು ಕಡಿಮೆ ಮಳೆಯಾಗಿದೆ ಎಂದು ಸರ್ಕಾರವೇ ತಿಳಿಸಿದೆ. ಕೆಆರ್​ಎಸ್​ನಲ್ಲಿ ಉಳಿದಿರುವುದೇ 20 ಟಿಎಂಸಿ ನೀರು. ತಮಿಳುನಾಡಿಗೆ ನೀರು ಬಿಟ್ಟರೆ 7 ಟಿಎಂಸಿ ಹೋಗುತ್ತದೆ. ಉಳಿದ ನೀರಲ್ಲಿ ಡೆಡ್‌ಸ್ಟೋರೆಜ್ 5 ಟಿಎಂಸಿ ಆಗುತ್ತದೆ. ಬೆಂಗಳೂರಿನ ಜನತೆಗೆ ಕುಡಿಯಲೂ ನೀರು ಇರಲ್ಲ ಎಂದರು.

ರಾಜಕೀಯ ಹಿನ್ನಡೆ ಆಗುತ್ತದೆ ಎಂದು ಆ ನಾಯಕರು ಬೆಂಗಳೂರಿಗೆ ಬರಲ್ಲ ಎಂದು ಒಲೈಸಲು ನೀರು ಬಿಟ್ಟಿದ್ದೀರಿ. ದೇವರನ್ನು ಒಲೈಸುವಂತೆ ತಮಿಳುನಾಡಿನ ಡಿಎಂಕೆಗೆ ನೀರು ಬಿಟ್ಟು ಒಲೈಸುತ್ತಿದ್ದಾರೆ. ತಮಿಳುನಾಡು ಸಚಿವರು ನೀರು ನಿಮ್ಮಪ್ಪಂದ ಎಂದು ಪ್ರಶ್ನಿಸುತ್ತಿದ್ದಾರೆ. ನೀರು ಬಿಡುವ ಮೂಲಕ ನಮ್ಮ ಹಕ್ಕು ನಿಮ್ಮದೇ ಎಂದು ನೀರು ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿ.ಟಿ ರವಿಗೆ ಬೇರೆ ಎಲ್ಲೂ ಜಾಗ ಇಲ್ಲ ಅದಕ್ಕೆ ಮಂಡ್ಯಕ್ಕೆ ಹೋಗಿದ್ದಾರೆ ಎಂದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಕೌಂಟರ್ ಕೊಟ್ಟ ಸಿಟಿ ರವಿ, ಅವರು ಗೆದ್ದಿದ್ದಾರೆ, ನಾನು ಸೋತಿದ್ದೇನೆ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ನನ್ನ ಸೋಲು ಹೇಗಾಯ್ತು ಅಂತ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಅಹಂಕಾರದ ಮಾತುಗಳಿಂದ ಎಲ್ಲವೂ ಗೆಲ್ಲಲು ಸಾಧ್ಯವಿಲ್ಲ. ಸೋಲು ಶಾಶ್ವತವಲ್ಲ. ಜನರಿಗೆ ಒಳ್ಳೆಯದು ಮಾಡಿ ಎಂದು ಜನ ಮತ ನೀಡಿದ್ದಾರೆ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.



Join Whatsapp
Exit mobile version