ದೇಶದ ಅಧೋಗತಿಗೆ ಕಾಂಗ್ರೆಸ್ಸೇ ಕಾರಣ: ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಕಾಂಗ್ರೆಸ್ ನವರು ಮಹಾತ್ಮಾಗಾಂಧಿಯ ಹೆಸರನ್ನು ಬಹಳಷ್ಟು ದುರುಪಯೋಗಪಡಿಸಿ ಈ ದೇಶದ ಅಧೋಗತಿಗೆ ಕಾರಣರಾಗಿದ್ದಾರೆ‌. ಈ ದೇಶ ಅಧೋಗತಿಗೆ ಬಂದಿರುವುದೇ ಕಾಂಗ್ರೆಸ್ಸಿನಿಂದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದ್ದಾರೆ‌

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ ಅವರು ಕಾಂಗ್ರೆಸ್ ಕಾಲದಲ್ಲಿ ಡಿಐಜಿ ಒಬ್ಬರು ಪಿ.ಎಸ್.ಐ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅವರು ಏನೂ ಮಾಡಲಿಲ್ಲ. ಎಫ್.ಐ.ಆರ್ ನಲ್ಲಿ ಹೆಸರು ಬಂದರೂ ಕೂಡ ಅವರ ವಿಚಾರಣೆ, ಬಂಧನ, ಅಮಾನತು ಯಾವುದನ್ನೂ ಮಾಡಲಿಲ್ಲ. ಈಗ ನಾನು ಬಂದ ನಂತರ ಕಾನೂನು ಕ್ರಮ ಜರುಗಿಸಿದ್ದೇನೆ ಎಂದಿದ್ದಾರೆ.

ನಮ್ಮಲ್ಲಿ‌ ತನಿಖೆಗೆ ಮನವಿ ಮಾಡುವವರು ಈ ಹಿಂದೆ ಅವರ ಎಲ್ಲಾ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಏಕೆ ವಹಿಸಲಿಲ್ಲ. ಅವರು ಯಾಕೆ ಮಾಡಲಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು. ಅಥವಾ ಅಪರಾಧಿಗಳನ್ನು ಬಂಧಿಸಬಹುದಾಗಿತ್ತು. ಅವರು ಮಾಡದೇ ಇರುವುದನ್ನು ನಮಗೆ ಹೇಳುತ್ತಿದ್ದಾರೆ. ನ್ಯಾಯಾಂಗ ತನಿಖೆ ಮಾಡಿರುವ ಪ್ರಕರಣಗಳು ಹೊರಗೆ ಬಂದಿಲ್ಲ. ಈ ಪ್ರಕರಣದಲ್ಲಿ ಕೆಲವು ಕಾಂಗ್ರೆಸ್ ನಾಯಕರಿರುವುದು ಗೊತ್ತಾಗಿ, ಪ್ರಕರಣದ ದಾರಿ ತಪ್ಪಿಸಲು ನ್ಯಾಯಾಂಗ ತನಿಖೆಯಾಗಬೇಕು ಎನ್ನುತ್ತಿದ್ದಾರೆ ಎಂದರು.

- Advertisement -

ನಮ್ಮ ಸರ್ಕಾರ ಸಂಪುರ್ನವಾಗಿ ನಿಷ್ಪಕ್ಷಪಾತ ತನಿಖೆಯನ್ನು ನಿಷ್ಠುರವಾಗಿ, ಯಾವ ದಯೆ, ದಾಕ್ಷಿಣ್ಯವಿಲ್ಲದೆ, ಕ್ರಮ ಕೈಗೊಳ್ಳು ಮುಕ್ತವಾದ ಅಧಿಕಾರವನ್ನು ತನಿಕಾಧಿಕಾರಿಗಳಿಗೆ ಕೊಟ್ಟಿದ್ದರಿಂದ ಈ ಪ್ರಕರಣ ಬಯಲಿಗೆ ಬಂದಿದೆ. ಈಗಾಗಲೇ ಅವರ ಕಾಲದ ಹಗರಣಗಳು ಹೊರಗೆ ಬಂದಿವೆ, ಕಾಲಕಾಲಕ್ಕೆ ಇನ್ನಷ್ಟು ಹೊರಬರಲಿದೆ ಎಂದರು.

ಕಾಂಗ್ರೆಸ್ ಅಪರಾಧಿ ಸ್ಥಾನದಲ್ಲಿದ್ದು ಮೊದಲಿಗೆ ಅವರು ಜನರ ಬಳಿ ಕ್ಷಮೆಯಾಚಿಸಬೇಕು. ಅವತ್ತು ನಾವು ಇಂಥ ಕೆಲಸ ಮಾಡಲಿಲ್ಲ. ಈ ದೇಶ ಅದೋಗತಿಗೆ ಬಂದಿರುವುದೇ ಕಾಂಗ್ರೆಸ್ಸಿನಿಂದ ಎಂದು ಟೀಕಿಸಿದರು.

Join Whatsapp