Home ಕರಾವಳಿ ನಾಳೆ ಸಂಜೆ ಕಾಂಗ್ರೆಸ್’ನಿಂದ ಮಲ್ಲೂರಿನಲ್ಲಿ ವಿಜಯೋತ್ಸವ: ಇನಾಯತ್ ಅಲಿ ಭಾಗಿ

ನಾಳೆ ಸಂಜೆ ಕಾಂಗ್ರೆಸ್’ನಿಂದ ಮಲ್ಲೂರಿನಲ್ಲಿ ವಿಜಯೋತ್ಸವ: ಇನಾಯತ್ ಅಲಿ ಭಾಗಿ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ವಿಜಯ ಸಾಧಿಸಿದ್ದು, ಗೆಲುವನ್ನು ಸಂಭ್ರಮಿಸಲು ಮಲ್ಲೂರು ವಲಯ ಕಾಂಗ್ರೆಸ್, ಯುವ ಕಾಂಗ್ರೆಸ್ ಜಂಟಿಯಾಗಿ ನಾಳೆ ( ಮೇ 23) ಸಂಜೆ 7 ಗಂಟೆಗೆ ಬದ್ರಿಯಾ ನಗರದಿಂದ ಮಲ್ಲೂರು ವರೆಗೆ ಅದ್ದೂರಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸುಧೀರ್ ರಾವ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇನಾಯತ್ ಅಲಿ ಯವರಿಗೆ ಮಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭರ್ಜರಿ ಲೀಡ್ ಕೊಟ್ಟ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಈ ವಿಜಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಆದುದರಿಂದ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಯುವ ಕಾಂಗ್ರೆಸ್ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸುಧೀರ್ ರಾವ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version