Home ಟಾಪ್ ಸುದ್ದಿಗಳು ಕಾಂಗ್ರೆಸ್ ನಾಯಕ, ಮಾಜಿ ಸಚಿವ ನಿರ್ಮಲ್ ಸಿಂಗ್ ವಿರುದ್ಧ ಗೋಹತ್ಯೆ ಪ್ರಕರಣ ದಾಖಲು

ಕಾಂಗ್ರೆಸ್ ನಾಯಕ, ಮಾಜಿ ಸಚಿವ ನಿರ್ಮಲ್ ಸಿಂಗ್ ವಿರುದ್ಧ ಗೋಹತ್ಯೆ ಪ್ರಕರಣ ದಾಖಲು

ಸಹರಾನ್ ಪುರ : ಕಾಂಗ್ರೆಸ್ ನಾಯಕ, ಮಾಜಿ ಸಚಿವ ನಿರ್ಮಲ್ ಸಿಂಗ್ ವಿರುದ್ಧ ಗೋಹತ್ಯೆ ಆರೋಪದ ಪ್ರಕರಣ ದಾಖಲಾಗಿದೆ. ಸಹರಾನ್ ಪುರ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಫಾರಂ ಹೌಸ್ ನಲ್ಲಿ ಮೂರು ದನಗಳಿಗೆ ಸಿಂಗ್ ಗುಂಡಿಕ್ಕಿದ್ದು, ಅದರಲ್ಲಿ ಒಂದು ದನ ಸಾವಿಗೀಡಾಗಿದೆ ಎನ್ನಲಾಗಿದೆ. ಬಿಜೆಪಿ ಪರ ಸಂಘಟನೆಗಳು ಈ ಬಗ್ಗೆ ಆಕ್ರೋಶಿತರಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ದನಗಳು ಆಕಸ್ಮಿಕವಾಗಿ ಸಿಂಗ್ ಅವರ ಫಾರಂ ಹೌಸ್ ಆವರಣಕ್ಕೆ ಬಂದಿದೆ. ಇದರಿಂದ ಆಕ್ರೋಶಿತರಾದ ಸಿಂಗ್ ಅವುಗಳ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ದನ ಮೃತಪಟ್ಟಿದ್ದರೆ, ಇನ್ನೆರಡು ದನಗಳು ನಾಪತ್ತೆಯಾಗಿವೆ ಎಂದು ದೂರಲಾಗಿದೆ.

ಬೆಹತ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp
Exit mobile version