ಕಾಂಗ್ರೆಸ್ ನಾಯಕ, ಮಾಜಿ ಸಚಿವ ನಿರ್ಮಲ್ ಸಿಂಗ್ ವಿರುದ್ಧ ಗೋಹತ್ಯೆ ಪ್ರಕರಣ ದಾಖಲು

Prasthutha|

ಸಹರಾನ್ ಪುರ : ಕಾಂಗ್ರೆಸ್ ನಾಯಕ, ಮಾಜಿ ಸಚಿವ ನಿರ್ಮಲ್ ಸಿಂಗ್ ವಿರುದ್ಧ ಗೋಹತ್ಯೆ ಆರೋಪದ ಪ್ರಕರಣ ದಾಖಲಾಗಿದೆ. ಸಹರಾನ್ ಪುರ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ತಮ್ಮ ಫಾರಂ ಹೌಸ್ ನಲ್ಲಿ ಮೂರು ದನಗಳಿಗೆ ಸಿಂಗ್ ಗುಂಡಿಕ್ಕಿದ್ದು, ಅದರಲ್ಲಿ ಒಂದು ದನ ಸಾವಿಗೀಡಾಗಿದೆ ಎನ್ನಲಾಗಿದೆ. ಬಿಜೆಪಿ ಪರ ಸಂಘಟನೆಗಳು ಈ ಬಗ್ಗೆ ಆಕ್ರೋಶಿತರಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ದನಗಳು ಆಕಸ್ಮಿಕವಾಗಿ ಸಿಂಗ್ ಅವರ ಫಾರಂ ಹೌಸ್ ಆವರಣಕ್ಕೆ ಬಂದಿದೆ. ಇದರಿಂದ ಆಕ್ರೋಶಿತರಾದ ಸಿಂಗ್ ಅವುಗಳ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ದನ ಮೃತಪಟ್ಟಿದ್ದರೆ, ಇನ್ನೆರಡು ದನಗಳು ನಾಪತ್ತೆಯಾಗಿವೆ ಎಂದು ದೂರಲಾಗಿದೆ.

- Advertisement -

ಬೆಹತ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp