Home ಟಾಪ್ ಸುದ್ದಿಗಳು ಸಹಕಾರ ಕ್ಷೇತ್ರವನ್ನು ಎಲ್ಲ ರಂಗಗಳಲ್ಲಿ ವಿಸ್ತರಿಸಬೇಕು :ಸಿ ಎಂ ಬೊಮ್ಮಾಯಿ

ಸಹಕಾರ ಕ್ಷೇತ್ರವನ್ನು ಎಲ್ಲ ರಂಗಗಳಲ್ಲಿ ವಿಸ್ತರಿಸಬೇಕು :ಸಿ ಎಂ ಬೊಮ್ಮಾಯಿ

ಬೆಂಗಳೂರು: ನಾವೆಲ್ಲರೂ ಸೇರಿ ಸಹಕಾರಿ ಕ್ಷೇತ್ರ ನಿಯಂತ್ರಿಸುವಲ್ಲಿ ನಿರತರಾಗಿದ್ದೇವೆ. ಆದರೆ ಅನ್ಯರಾಜ್ಯಗಳಲ್ಲಿ ಸಹಕಾರಿ ರಂಗವು ಅಲ್ಲಿನ ಸರಕಾರಗಳನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಬಲಿಷ್ಠವಾಗಿ ಬೆಳೆದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆಂಗೇರಿಯಲ್ಲಿ ರವಿವಾರ ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ “ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಹಕಾರವನ್ನು ಎಲ್ಲ ರಂಗಗಳಲ್ಲಿ ವಿಸ್ತರಿಸಲು ಅವಕಾಶಗಳಿವೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕಿದೆ ಎಂದು ಹೇಳಿದರು.

ಸಹಕಾರಿ ಸಾಹುಕಾರ ಪದ್ಧತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದ್ದು, ಇದು ಕೊನೆಗೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರವು ಸಹಕಾರಿ ಸಂಘಗಳಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸದಸ್ಯತ್ವ ನೋಂದಣಿಗೆ ಅವಕಾಶ ಕಲ್ಪಿಸುವುದರ ಜತೆಗೆ ಆ ನೋಂದಣಿ ಶುಲ್ಕವನ್ನೂ ಸರಕಾರ ಭರಿಸಲು ಉದ್ದೇಶಿಸಿದೆ ಎಂದು ತಿಳಿಸಿದರು.

ರಾಜ್ಯದ ಪ್ರತಿ ತಾಲೂಕಿನಲ್ಲೂ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಶೇ. 90ರಷ್ಟು ಷೇರು ಬಂಡವಾಳವನ್ನೂ ಸ್ವತಃ ಸರಕಾರ ನೀಡಲಿದೆ . ಇದಲ್ಲದೆ, ರಾಜ್ಯದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆಗೆ ಸರಕಾರ ನಿರ್ಧಾರ ಮಾಡಿದೆ ಎಂದು ಬೊಮ್ಮಾಯಿ ತಿಳಿಸಿದರು.

Join Whatsapp
Exit mobile version