Home ಟಾಪ್ ಸುದ್ದಿಗಳು ಸಹಪಾಠಿಯ ತಾಯಿಯಿಂದ 8ನೇ ತರಗತಿ ವಿದ್ಯಾರ್ಥಿಯ ಕೊಲೆ: ಕೊಲೆಗೆ ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಸಹಪಾಠಿಯ ತಾಯಿಯಿಂದ 8ನೇ ತರಗತಿ ವಿದ್ಯಾರ್ಥಿಯ ಕೊಲೆ: ಕೊಲೆಗೆ ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಪುದುಚೇರಿ: ಮಹಿಳೆಯೋರ್ವರು ತನ್ನ ಮಗನ ಸಹಪಾಠಿಗೆ ವಿಷ ನೀಡಿ ಹತ್ಯೆ ಮಾಡಿದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಬಾಲಾ ಮಣಿಕಂಠನ್ ಎಂದು ಗುರುತಿಸಲಾಗಿದೆ. ಓದುವುದರಲ್ಲಿ ಮಗನಿಗೆ ಕಾಂಪಿಟೇಷನ್ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಈ ಅಮಾನವೀಯ ಕೃತ್ಯ ಮಹಿಳೆ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.

8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಾ ಮಣಿಕಂಠನ್ ಶೈಕ್ಷಣಿಕ ಸಾಲಿನ ರಜೆಗೆಂದು ಮನೆಗೆ ಹಿಂದಿರುಗಿದಾಗ ತೂಕಡಿಸಲು ಆರಂಭಿಸಿದ್ದನು. ಮುಖವು ಬಿಳುಚಿಕೊಂಡಿತ್ತು. ಗಾಬರಿಗೊಂಡ ತಾಯಿ  ಶಾಲೆಯಲ್ಲಿ ಏನಾದರೂ ಸೇವಿಸಿದ್ದೀಯಾ ಎಂದು ಕೇಳಿದ್ದಾರೆ. ವಾಚ್ ಮ್ಯಾನ್ ತನಗೆ ಜ್ಯೂಸ್ ನೀಡಿದ್ದರು, ಅದನ್ನು ಕುಡಿದಿದ್ದೇನೆ. ಆದರೆ ಕುಡಿದ ನಂತರ ಕುಸಿದು ಬಿದ್ದಿರುವುದಾಗಿ ಬಾಲಾ ಮಣಿಕಂದನ್ ತಿಳಿಸಿದ್ದಾನೆ.

ತಕ್ಷಣವೇ ಬಾಲಾ ಮಣಿಕಂಠನ್ ಕಾರೈಕ್ಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಾಚ್ ಮ್ಯಾನ್ ನ್ನು ಬಾಲಾನ  ಪೋಷಕರು ಮತ್ತು ಆತನ ಸಂಬಂಧಿಕರು ವಿಚಾರಿಸಿದಾಗ ಆತ,  ಮಹಿಳೆಯೊಬ್ಬರು ತನ್ನ ಬಳಿಗೆ ಬಂದು ಎರಡು ಜ್ಯೂಸ್ ಬಾಟಲಿಗಳನ್ನು ನೀಡಿ, ಬಾಲಾನಿಗೆ ಕೊಡಲು ಅವನ ಮನೆಯವರು ಕಳುಹಿಸಿದ್ದಾರೆ ಎಂದು ಕೊಟ್ಟಿದ್ದರು, ಅದನ್ನು ಬಾಲಾನಿಗೆ ನೀಡಿದ್ದೇನೆ ಎಂದು ಹೇಳಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗಲೂ ಮಹಿಳೆಯೊಬ್ಬರು ವಾಚ್ ಮ್ಯಾನ್  ಗೆ ಜ್ಯೂಸ್ ನೀಡುತ್ತಿರುವುದು ಕಂಡುಬಂದಿದೆ. ಮಹಿಳೆಯ ಬಗ್ಗೆ ತನಿಖೆ ನಡೆಸಿದಾಗ   ಆಕೆ ಬಾಲಾನ ಸಹಪಾಠಿ ಅರುಲ್ ಮೇರಿಯ ತಾಯಿ ಸಗಾಯರಾಣಿ ವಿಕ್ಟೋರಿಯಾ ಎಂದು ಗೊತ್ತಾಗಿದೆ. 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಾನ ಪರಿಸ್ಥಿತಿ ಬಿಗಡಾಯಿಸಲು ತೊಡಗಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೃತ ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಸಗಾಯರಾಣಿ ವಿಕ್ಟೋರಿಯಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ಮುಗ್ಧ ಬಾಲಕನ್ನು ಕೊಲಡ ಮಾಡಲು ಕಾರಣ ಹೇಳಿದ್ದಾಳೆ.  ತನ್ನ ಮಗ ಅರುಲ್ ಮೇರಿ ಮತ್ತು ಬಾಲಾ ನಡುವೆ ಅಂಕ ಗಳಿಸುವ ವಿಚಾರವಾಗಿ ಪೈಪೋಟಿ ಇತ್ತು. ಇದರಿಂದಾಗಿ ಆಗಾಗ ಸಣ್ಣ-ಪುಟ್ಟ ಜಗಳವಾಗುತ್ತಿತ್ತು. ಇದರಿಂದ ಅಸಮಾಧಾನಗೊಂಡು ಈ ಕೃತ್ಯವೆಸಗಿರುವುದಾಗಿ ಮಹಿಳೆ ಬಾಯಿ ಬಿಟ್ಟಿದ್ದಾಳೆ.

ಓದುವುದರಲ್ಲಿದ್ದ ಚುರುಕು ಬಾಲಾ ಮಣಿಕಂಠನ್ ಪಾಲಿಗೆ ಮರಣವನ್ನು ತಂದುಕೊಟ್ಟಿರುವುದು ದುರಂತವಾಗಿದೆ.

Join Whatsapp
Exit mobile version