ಕ್ರೈಸ್ತ ಮಿಷನರಿಗಳು ನಕ್ಸಲರಿಗಿಂತ ಅಪಾಯಕಾರಿ: ಬಿಜೆಪಿ ಸಂಸದೆ

Prasthutha|

ನವದೆಹಲಿ: ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ನಿರಂತರವಾಗಿ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿ ಸಂಸದೆ ಗೋಮತಿ ಸಾಯಿ ಅವರು, ಕ್ರೈಸ್ತರ ವಿರುದ್ಧ ಅಪಮಾನಕರ ಹೇಳಿಕೆ ನೀಡಿದ್ದಾರೆ. ಮಿಷನರಿಗಳು ನಕ್ಸಲರಿಗಿಂತಲೂ ಅಪಾಯಕಾರಿ ಎಂದು ಬಿಜೆಪಿ ಸಂಸದೆ ಗೋಮತಿ ಸಾಯಿ ಹೇಳಿದ್ದಾರೆ.

- Advertisement -


ಲೋಕಸಭೆಯಲ್ಲಿ ಶುಕ್ರವಾರ ಶೂನ್ಯ ವೇಳೆಯಲ್ಲಿ ಛತ್ತೀಸ್ ಗಢದಲ್ಲಿ ಧಾರ್ಮಿಕ ಮತಾಂತರ ವಿಚಾರ ಪ್ರಸ್ತಾಪಿಸಿದ ಅವರು, ”ಈ ವಿಚಾರವು ಕೇವಲ ಧರ್ಮ, ಮತಾಂತರಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು” ಎಂದು ಕಳವಳ ವ್ಯಕ್ತಪಡಿಸಿದರು.


‘ನಕ್ಸಲರು ಈಗ ಹಿಂದಡಿ ಇಟ್ಟಿದ್ದಾರೆ. ಆದರೆ ಕ್ರೈಸ್ತ ಮಿಷನರಿಗಳ ಹಾವಳಿ ಹೆಚ್ಚಾಗಿದೆ. ಆಮಿಷ ಮತ್ತು ಬಲವಂತದ ಮೂಲಕ ಮತಾಂತರ ಮಾಡಿ ಈ ಮಿಷನರಿಗಳು ನಕ್ಸಲರಿಗಿಂತಲೂ ಭಯಾನಕವಾಗಿ ತಯಾರಾಗಿದ್ದಾರೆ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸಂಸದೆಯ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

Join Whatsapp