Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಮನೆ ಕುಸಿತ ಪ್ರದೇಶಕ್ಕೆ ಮಾಜಿ ಸಚಿವೆ ಮೋಟಮ್ಮ ಭೇಟಿ

ಚಿಕ್ಕಮಗಳೂರು: ಮನೆ ಕುಸಿತ ಪ್ರದೇಶಕ್ಕೆ ಮಾಜಿ ಸಚಿವೆ ಮೋಟಮ್ಮ ಭೇಟಿ

►’ಸರ್ಕಾರ ಸಂತ್ರಸ್ತರ ನೆರವಿಗೆ ಬರಲಿ’

ಕೊಟ್ಟಿಗೆಹಾರ: ಮನೆಕುಸಿತ ಪ್ರದೇಶಗಳಾದ ಕೊಟ್ಟಿಗೆಹಾರದ ಅಜಾದ್ ನಗರ,ಸಬ್ಲಿ,ಹೆಬ್ಬರಿಗೆ,ಕೂಡಹಳ್ಳಿ,ಬಣಕಲ್ ಗ್ರಾಮಗಳಿಗೆ ಮಾಜಿ ಸಚಿವೆ ಮೋಟಮ್ಮ ಭೇಟಿ ನೀಡಿ ಹಾನಿಯಾದ ಮನೆಗಳನ್ನು ವೀಕ್ಷಿಸಿ ಸಂತ್ರಸ್ತರಿಗೆ  ಆಹಾರದ ಕಿಟ್ ಅನ್ನು ವಿತರಿಸಿದರು.

ಬಳಿಕ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ ‘ಆದಷ್ಟು ಬೇಗ  ಸರ್ಕಾರ ಮನೆ ಹಾನಿಯಾದ ನಿರ್ವಶ್ರಿತರ ನೆರವಿಗೆ ಬರಬೇಕು.ಅವರಿಗೆ ಪರಿಹಾರ ಕೊಡುವ ಕೆಲಸವಾಗಬೇಕು.ಹಲವು ಮಂದಿ ಈ ಬಾರಿಯ ಮಳೆಯಿಂದ ಮನೆ ಕಳೆದು ಕೊಂಡು ಅತಂತ್ರರಾಗಿದ್ದಾರೆ.ಅವರಿಗೆ ಬದುಕಲು ಭರವಸೆ ನೀಡುವ ಕೆಲಸ ಸರ್ಕಾರದಿಂದ ಆಗಬೇಕು.ಕಾಂಗ್ರೆಸ್ ಪಕ್ಷ ಸದಾ ಬಡವರ ಪರವಿದೆ’ ಎಂದರು.

ಈ ಸಂದರ್ಭದಲ್ಲಿ ಹೊಸ್ಕರೆ ರಮೇಶ್,ಬಿ.ಎ.ಉಮ್ಮರ್,ಸಂಪತ್,ಮಂಜಯ್ಯ,ಮುಗ್ರಹಳ್ಳಿ ಸಂಪತ್, ಬಿ.ಎಸ್. ಜಯರಾಂ,ಗುತ್ತಿ ಅರುಣ್, ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ  ಇರ್ಫಾನ್, ತರುವೆ ಗ್ರಾ.ಪಂ.ಅಧ್ಯಕ್ಷ  ಬಿ.ಎಂ.ಸತೀಶ್,ಬಣಕಲ್  ಗ್ರಾ.ಪಂ.ಸದಸ್ಯ ಸಿ.ಎಸ್.ವಿನಯ್,ದಿಲ್ ದಾರ್ ಬೇಗಂ,ಅಜೀಜ್,ಅಬ್ದುಲ್ ರೆಹಮಾನ್,ಸೋಮಯ್ಯ, ಮೊಹಿದ್ದಿನ್  ಮತ್ತಿತರರು ಇದ್ದರು

Join Whatsapp
Exit mobile version