Home ಟಾಪ್ ಸುದ್ದಿಗಳು ಅಗ್ನಿಪಥ ಯೋಜನೆ ಮೂಲಕ ಯುವಕರ ಕನಸುಗಳನ್ನು ಕೇಂದ್ರ ಸರ್ಕಾರ ಕೊಂದಿದೆ: ರಾಹುಲ್ ಗಾಂಧಿ

ಅಗ್ನಿಪಥ ಯೋಜನೆ ಮೂಲಕ ಯುವಕರ ಕನಸುಗಳನ್ನು ಕೇಂದ್ರ ಸರ್ಕಾರ ಕೊಂದಿದೆ: ರಾಹುಲ್ ಗಾಂಧಿ

ನವದೆಹಲಿ: ಅಗ್ನಿಪಥ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಸಾಕಷ್ಟು ಯುವಕರ ಕನಸುಗಳನ್ನು ಕೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದರ ವಿರುದ್ಧ ‘ಬೀದಿಯಿಂದ ಸಂಸತ್ತಿಗೆ’ ಹೆಸರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ಯುವಕರಿಗೆ ರಾಹುಲ್ ಬೆಂಬಲ ಸೂಚಿಸಿದ್ದಾರೆ. ಯುವಕರೊಂದಿಗೆ ಕುಳಿತ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿರುವ ಅವರು, ‘ಸೇನೆ ಮತ್ತು ವಾಯುಪಡೆಗೆ ಖಾಯಂ ನೇಮಕಾತಿ ಪ್ರಕ್ರಿಯೆಯನ್ನು ತೆಗೆದುಹಾಕಿರುವ ಕೇಂದ್ರ ಸರ್ಕಾರ, ‘ತಾತ್ಕಾಲಿಕ ನೇಮಕಾತಿ’ ಕಲ್ಪಿಸುವ ಅಗ್ನಿವೀರ್ ಯೋಜನೆ ಜಾರಿಗೆ ತರುವ ಮೂಲಕ ಅಸಂಖ್ಯಾತ ಯುವಕರ ಕನಸುಗಳನ್ನು ನಾಶಮಾಡಿದೆ’ ಎಂದು ಹಿಂದಿಯಲ್ಲಿ ಬರೆದಿದ್ದಾರೆ.

Join Whatsapp
Exit mobile version