ದೆಹಲಿ ‘ಲಾಲ್ ಮಸ್ಜಿದ್’ ಕೆಡವಲು ಕೇಂದ್ರ ಅರೆ ಸೇನಾಪಡೆ ನಿರ್ಧಾರ

Prasthutha|

ದೆಹಲಿಯ ಲೋಧಿ ರಸ್ತೆಯಲ್ಲಿರುವ ಲಾಲ್ ಮಸ್ಜಿದನ್ನು ಕೆಡವಲು ಕೇಂದ್ರ ಪಡೆ ಮುಂದಾಗಿದೆ. ಮಸೀದಿಯನ್ನು ಖಾಲಿ ಮಾಡುವಂತೆ ಪೊಲೀಸರು ಇಮಾಮ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

- Advertisement -

ಸ್ವಾತಂತ್ರ್ಯಾ ಪೂರ್ವದಿಂದಲೇ  ಮುಸ್ಲಿಮರು ಆರಾಧನೆ ನಡೆಸುತ್ತಾ ಬಂದಿರುವ ಮಸೀದಿಯನ್ನು ಕೆಡವಿ ವಕ್ಫ್ ಭೂಮಿಯನ್ನು ಅತಿಕ್ರಮಣ ಮಾಡುವ ಮೂಲಕ ಅರೆಸೈನಿಕ ಪಡೆ ಕಚೇರಿಗಳು ಮತ್ತು ಬ್ಯಾರಕ್‌ಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ  ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ದೆಹಲಿ ವಕ್ಫ್ ಮಂಡಳಿ ಹೇಳಿದೆ. ನಿಜಾಮುದ್ದೀನ್ ಮತ್ತು ಲೋಧಿ ರಸ್ತೆ ಪೊಲೀಸ್ ಠಾಣೆಗಳ ಎಸ್‌ಎಚ್‌ಒಗಳು ಲಾಲ್ ಮಸ್ಜಿದ್ ನ ಇಮಾಮರನ್ನು ಸಂಪರ್ಕಿಸಿ ಮಸೀದಿಯನ್ನು ಖಾಲಿ ಮಾಡುವಂತೆ ಕೇಳಿಕೊಂಡಿದ್ದಾರೆ.

ಮಾಹಿತಿ ಲಭಿಸಿ ಲಾಲ್ ಮಸ್ಜಿದ್ ಗೆ ಭೇಟಿ ನೀಡಿದ ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್, ಪೊಲೀಸರ ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ, CRPF ನ ಈ ಕ್ರಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. CRPF ಈ ಹಿಂದೆಯೂ ಲಾಲ್ ಮಸ್ಜಿದನ್ನು ಧ್ವಂಸಗೊಳಿಸಲು ಪ್ರಯತ್ನಿಸಿತ್ತು ಎಂದು ಅಮಾನತುಲ್ಲಾ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೀದಿಗಳನ್ನು ಧ್ವಂಸಗೊಳಿಸುವುದು ಮತ್ತು ಸಮಾಧಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಕೈಬಿಡುವಂತೆ ಅಮಾನತುಲ್ಲಾ ಖಾನ್ ಲೆಫ್ಟಿನೆಂಟ್ ಗವರ್ನರ್ ಅವರನ್ನು ಕೇಳಿಕೊಂಡಿದ್ದಾರೆ.

Join Whatsapp