Home ಟಾಪ್ ಸುದ್ದಿಗಳು ಚುನಾವಣೆ ಒಳಗೆ 13 ಜನ ಶಾಸಕರ ಸಿಡಿಗಳು ಬಿಡುಗಡೆಯಾಗಲಿವೆ: ಸಿಎಂ ಇಬ್ರಾಹಿಂ ಹೊಸ ಬಾಂಬ್

ಚುನಾವಣೆ ಒಳಗೆ 13 ಜನ ಶಾಸಕರ ಸಿಡಿಗಳು ಬಿಡುಗಡೆಯಾಗಲಿವೆ: ಸಿಎಂ ಇಬ್ರಾಹಿಂ ಹೊಸ ಬಾಂಬ್

ಕೋಲಾರ: ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ 13 ಜನ ಶಾಸಕರ ಸಿಡಿಗಳಿವೆ. ಚುನಾವಣೆಯೊಳಗೆ ಅವು ಬಿಡುಗಡೆಯಾಗಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.


ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣದ ವಿಚಾರಣೆ ಪಾರದರ್ಶಕವಾಗಿರಬೇಕಾದರೆ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸುವುದು ಉತ್ತಮ. ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ಅಲ್ಲ, ಸಿಬಿಐ ತನಿಖೆ ಆಗಬೇಕು. ಇಲ್ಲವಾದಲ್ಲಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


ಸಿದ್ದರಾಮಯ್ಯ ಬಾದಾಮಿ ಗೆಲ್ಲಲು ನಾನು ಕಾರಣ. ಬಾದಾಮಿ ಚುನಾವಣೆಯಲ್ಲಿ ನಾನು ಹೋಂವರ್ಕ್ ಮಾಡಿದ್ದು, ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ. ಮನೇ ದೇವರು ಹೇಳಿದ್ದಾರೆ ಅವರು ಬರಲ್ಲ. ಆದರೆ ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರಕ್ಕೆ ಬರುತ್ತಿದ್ದಾರೆ. ಕೊನೆಗೆ ಹೈಕಮಾಂಡ್ ಮೇಲೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲು ಕೋಲಾರಕ್ಕೆ ಕರೆದುಕೊಂಡು ಕೆಲವರು ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Join Whatsapp
Exit mobile version