ತಾಲಿಬಾನ್ ಕುರಿತು ಹೇಳಿಕೆ : ಉರ್ದು ಕವಿ ವಿರುದ್ಧ ಮೊಕದ್ದಮೆ

Prasthutha|

ಗುಣಾ: ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಮಧ್ಯ ಪ್ರದೇಶದ ಗುಣಾದಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ವಾಲ್ಮೀಕಿ ಕೂಡ ಡಕಾಯಿತನಾಗಿದ್ದ. ತಿದ್ದಿಕೊಂಡು ಕವಿಯಾದ. ತಾಲಿಬಾನಿಗರೂ ಬದಲಾಗುವರು ಎಂದು ಮುನವ್ವರ್ ರಾಣಾ ಬರೆದಿದ್ದರು.

- Advertisement -


ಮಧ್ಯ ಪ್ರದೇಶದ ಬಿಜೆಪಿ ಎಸ್ ಸಿ/ಎಸ್ ಟಿ ಘಟಕದ ಅಧ್ಯಕ್ಷ ಸುನಿಲ್ ಮಾಲ್ವಿಯಾ ಸಲ್ಲಿಸಿದ ದೂರಿನ ಮೇಲೆ ಗುಣಾ ಜಿಲ್ಲೆಯ ಕೋಟ್ಟಾಲಿ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp