Home ಟಾಪ್ ಸುದ್ದಿಗಳು ತಡರಾತ್ರಿ ವೇಳೆ ನದಿಗೆ ಉರುಳಿದ ಬಸ್ | 6 ಪ್ರಯಾಣಿಕರ ದಾರುಣ ಸಾವು

ತಡರಾತ್ರಿ ವೇಳೆ ನದಿಗೆ ಉರುಳಿದ ಬಸ್ | 6 ಪ್ರಯಾಣಿಕರ ದಾರುಣ ಸಾವು

ಮೆಘಾಲಯ: 21 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ವೊಂದು ಶಿಲ್ಲಾಂಗ್ ಸಮೀಪದ ರಿಂಗ್ಢಿ ನದಿಗೆ ಉರುಳಿ ಬಿದ್ದಿದ್ದು 6 ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಉಳಿದಂತೆ 16 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಬುಧವಾರ ತಡರಾತ್ರಿ 12ರ ವೇಳೆ ಬಸ್ ನದಿಗೆ ಉರುಳಿ ಬಿದ್ದಿದ್ದು, ಮಾಹಿತಿ ಪಡೆದ ಪೊಲೀಸರು, ರಕ್ಷಣಾ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದು 16 ಜನರನ್ನು ರಕ್ಷಿಸಿದ್ದಾರೆ, ದುರದೃಷ್ಟವಶಾತ್ 6 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ 6 ಜನರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Join Whatsapp
Exit mobile version