Home ಕರಾವಳಿ ಮಂಗಳೂರು | ಬಸ್ ಬೆಂಕಿಗಾಹುತಿ ಪ್ರಕರಣ: ಚಾಲಕ ಬಂಧನ

ಮಂಗಳೂರು | ಬಸ್ ಬೆಂಕಿಗಾಹುತಿ ಪ್ರಕರಣ: ಚಾಲಕ ಬಂಧನ

ಮಂಗಳೂರು:  ಏ .8 ರಂದು ನಗರದ ಹಂಪನಕಟ್ಟೆ ಬಳಿ ಖಾಸಗಿ ಬಸ್ ಬೈಕ್‌ ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಪ್ರಕರಣಕ್ಕೆ ಸಂಬಂಧಿಸಿ ಬಸ್ ಚಾಲಕನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಜನತಾ ಕಾಲೊನಿ ನಿವಾಸಿ ಬಿಜು ಮೋನು (54) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಹಂಪನಕಟ್ಟೆ ಸಿಗ್ನಲ್ ಜಂಪ್ ಮಾಡಿದ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿತ್ತು.  ಈ ಹಿನ್ನೆಲೆಯಲ್ಲಿ ಬಿಜು ಮೋನು ವನ್ನು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಪಡಿಸಿದ್ದು , ಏ .26ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.

Join Whatsapp
Exit mobile version