ಎಲೆಕ್ಟ್ರಿಕ್ ಕೇಬಲ್ ತಗುಲಿ ಬಸ್ ಗೆ ಬೆಂಕಿ | ಆರು ಮಂದಿ ಸಜೀವ ದಹನ

Prasthutha|

ಜೈಪುರ : ಎಲೆಕ್ಟ್ರಿಕಲ್ ಕೇಬಲ್ ಗೆ ತಾಗಿ ಬಸ್ ಗೆ ಬೆಂಕಿ ತಗುಲಿ ಆರು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ರಾಜಸ್ಥಾನದ ಜಾಲೋರ್ ನಲ್ಲಿ ನಡೆದಿದೆ.

- Advertisement -

ಖಾಸಗಿ ಬಸ್ ಮಂಡೋರ್ ನಿಂದ ಬ್ಯಾವರ್ ಗೆ ಹೋಗುತಿತ್ತು. ಈ ವೇಳೆ ಮಹೇಶ್ ಪುರ ಗ್ರಾಮದ ಬಳಿ ಬಸ್ ನಿಲುಗಡೆ ಮಾಡಲಾಗಿತ್ತು. ಬಸ್ ನ ಮೇಲ್ಭಾಗ ಎಲೆಕ್ಟ್ರಿಕ್ ಕೇಬಲ್ ಗೆ ತಗುಲಿತ್ತು. ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ.

ಕೇಬಲ್ ನಲ್ಲಿ ವಿದ್ಯುತ್ ಪ್ರಸರಣವಾಗುತ್ತಿದ್ದುದರಿಂದ ಅದು ಬಸ್ ಗೆ ತಗುಲಿದ್ದು, ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಬಸ್ ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಲ್ಲರೂ ಒಳಗಡೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಆಗಲೇ ಆರು ಮಂದಿ ದಹಿಸಿ ಹೋಗಿದ್ದಾರೆ. 19 ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp