ಮೋದಿ ರ‍್ಯಾಲಿಗೆ ತೆರಳುತ್ತಿದ್ದ ಬಸ್ ಅಪಘಾತ: ಒಂದೇ ಕುಟುಂಬದ ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

Prasthutha|

ಸಹ್ರಾನಪುರ್: ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗಿಯಾಗಲು ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ ​​​ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ.

- Advertisement -


ಪ್ರವೀಣ್ ಚೌಹಾಣ್(45), ಆತನ ಪತ್ನಿ ಮಂಜು ಚೌಹಾಣ್(42), ಮಗಳಾದ ಶಿಲ್ಪಾ(22) ಸ್ಥಳದಲ್ಲೇಮೃತಪಟ್ಟಿದ್ದು, ಉಳಿದಂತೆ ವಿಷ್ಣು(17) ಹಾಗೂ ದಿಕ್ಷೀತ್(20) ಗಂಭೀರ ಗಾಯಗೊಂಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಯಲ್ಲಿ ಭಾಗಿಯಾಗಲು ಅನೇಕರನ್ನ ಹೊತ್ತು ಬಸ್ಸೊಂದು ತೆರಳುತ್ತಿತ್ತು. ಈ ವೇಳೆ ಕಾರ್ ಒಂದಕ್ಕೆ ಡಿಕ್ಕಿ ಹೊಡೆದಿದೆ.

Join Whatsapp