Home ಟಾಪ್ ಸುದ್ದಿಗಳು ಗುರಾಯಿಸಿ ನೋಡಿದ್ದಕ್ಕೆ ಅಣ್ಣನಿಂದ ತಮ್ಮನ ಕೊಲೆ

ಗುರಾಯಿಸಿ ನೋಡಿದ್ದಕ್ಕೆ ಅಣ್ಣನಿಂದ ತಮ್ಮನ ಕೊಲೆ

ಬೆಂಗಳೂರು: ಸಿಲಿಕಾನ್‌ ಸಿಟಿಯ ಕೆ.ಆರ್‌ ಪುರಂನ ಪ್ರಿಯಾಂಕ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಣ್ಣನಿಂದಲೇ ತಮ್ಮನ ಕೊಲೆಯಾಗಿದೆ

ಗುರಾಯಿಸಿದ ಎಂಬ ಒಂದೇ ಒಂದು ಕಾರಣಕ್ಕೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಅಣ್ಣ ರಾಮಕೃಷ್ಣ ಎಂಬಾತನು ತಮ್ಮ ಬಾಲು ಎಂಬಾತನನ್ನು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಅಪರಾಧಿಯು ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ ಎನ್ನಲಾಗಿದೆ.ಕೆ.ಆರ್‌ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version