ನವ ವಧು ಹೃದಯಾಘಾತದಿಂದ ನಿಧನ
Prasthutha: March 1, 2021

ಮಂಗಳೂರು : ನಿನ್ನೆ ವಿವಾಹವಾಗಿದ್ದ ಮದುಮಗಳು ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆಯೊಂದು ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಬಳಿ ನಡೆದಿದೆ.
ಅಡ್ಯಾರ್ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷರಾದ ಕೆಎಚ್ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಮಗಳು ಲೈಲಾ ಆಫಿಯಾ(23) ಎಂಬಾಕೆಯೇ ಮೃತಪಟ್ಟವರು.
ನಿನ್ನೆ ಲೈಲಾ ವಿವಾಹ ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ನಡೆದಿತ್ತು. ಅಡ್ಯಾರ್ ಗಾರ್ಡನ್ನಲ್ಲಿ ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಆ ಬಳಿಕ ನವಜೋಡಿಗಳು ಆಫಿಯಾ ಮನೆಯಲ್ಲಿ ಇದ್ದರು. ಇಂದು ಬೆಳಿಗ್ಗಿನ ಜಾವ 3ಗಂಟೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
