Home ಕರಾವಳಿ ಸೀಬೆ ಮರದಿಂದ ಬಿದ್ದು ಬಾಲಕ ಮೃತ್ಯು

ಸೀಬೆ ಮರದಿಂದ ಬಿದ್ದು ಬಾಲಕ ಮೃತ್ಯು

ಕಡಬ: ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಸೀಬೆ(ಪೇರಳೆ) ಹಣ್ಣಿನ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ನಡೆದಿದೆ.

ಮೃತ ಬಾಲಕನನ್ನು ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬವರ ಪುತ್ರ ಉಲ್ಲಾಸ್ ಡಿ.ಎಂ (8) ಎಂದು ಗುರುತಿಸಲಾಗಿದೆ.

ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ ಉಲ್ಲಾಸ್ ಗುರುವಾರ ಸಂಜೆ ಶಾಲೆಯಿಂದ ಮನೆಗೆ ಬಂದು ,ಸಮೀಪದಲ್ಲಿದ್ದ  ಸೀಬೆ ಮರಕ್ಕೆ ಹಣ್ಣು ಕೊಯ್ಯಲು ಹತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದ. ತಲೆ ಭಾಗಕ್ಕೆ ಉಂಟಾದ ಗಂಭೀರ ಏಟಿನಿಂದಾಗಿ ಅತಿಯಾದ ರಕ್ತ ಸ್ರಾವ ಉಂಟಾಗಿತ್ತು. ತಕ್ಷಣವೇ ಕಡಬ ಸರ್ಕಾರಿ ಸಮುದಾಯ ಅಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

Join Whatsapp
Exit mobile version